Advertisement

ರೈನಾ ಕಾರು ಅಪಘಾತ;ಅಪಾಯದಿಂದ ಪಾರು

07:45 AM Sep 13, 2017 | Team Udayavani |

ಕಾನ್ಪುರ: ಕ್ರಿಕೆಟಿಗ ಸುರೇಶ್‌ ರೈನಾ ಕಾರು ಅಪಘಾತವೊಂದಕ್ಕೆ ಸಿಲುಕಿದ್ದು, ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಉತ್ತರ ಪ್ರದೇಶದ ಇಟಾವಾದಲ್ಲಿ ಈ ಘಟನೆ ಸಂಭವಿಸಿತ್ತು. ಆಗ ಸ್ವತಃ ರೈನಾ ಅವರೇ ಕಾರು ಚಲಾಯಿಸುತ್ತಿದ್ದರು.

Advertisement

ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಯಿಂದ ಕಾನ್ಪುರಕ್ಕೆ ತಮ್ಮ ರೇಂಜ್‌ ರೋವರ್‌ ಎಸ್‌ಯುವಿ ಕಾರಿನಲ್ಲಿ ಹೋಗುತ್ತಿದ್ದಾಗ ಕಾರಿನ ಚಕ್ರವೊಂದು ಸ್ಫೋಟಗೊಂಡು ಅಪಘಾತ ಸಂಭವಿಸಿದ್ದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ. ಆಗ ರೈನಾ ನಿಧಾನ ಗತಿಯಲ್ಲಿ ಕಾರು ಚಲಾಯಿಸುತ್ತಿದ್ದುದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ.

ಅಪಘಾತದ ಬಳಿಕ ಸುರೇಶ್‌ ರೈನಾ ಅವರನ್ನು ಬೇರೊಂದು ಕಾರಿನಲ್ಲಿ ಕಾನ್ಪುರಕ್ಕೆ ತೆರಳಲು ವ್ಯವಸ್ಥೆ ಮಾಡಲಾಯಿತು. ದುಲೀಪ್‌ ಟ್ರೋಫಿಯಲ್ಲಿ ಅವರು ಇಂಡಿಯಾ ಬ್ಲೂ ತಂಡವನ್ನು ಮುನ್ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next