Advertisement

MS Dhoni ಕೊನೆ ಪಂದ್ಯ ಸುದ್ದಿ; ಖಂಡಿತವಾಗಿಯೂ…ಸುರೇಶ್ ರೈನಾ ಹೇಳಿದ್ದೇನು?

08:48 PM May 12, 2024 | Team Udayavani |

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರದ್ದು ಭಾನುವಾರ ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯವೇ ಐಪಿಎಲ್ ನ ಕೊನೆಯ ಪಂದ್ಯ ಎಂದು ಭಾರೀ ಸುದ್ದಿಯಾಗಿತ್ತು. ಈ ಕುರಿತು ಭಾರತ ತಂಡದ ಮಾಜಿ ಆಟಗಾರ, ಸಿಎಸ್‌ಕೆ ಆಲ್‌ರೌಂಡರ್ ಆಗಿದ್ದ ಸುರೇಶ್ ರೈನಾ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಚೆನ್ನೈನಲ್ಲಿ ತಮ್ಮ ಕೊನೆಯ ಲೀಗ್ ಪಂದ್ಯದ ನಂತರ ಐಪಿಎಲ್ ಆಡಲು ಧೋನಿ ಚೆಪಾಕ್‌ಗೆ ಹಿಂತಿರುಗುವುದಿಲ್ಲ ಎಂಬ ವದಂತಿಗಳನ್ನು ವೀಕ್ಷಕ ವಿವರಣೆ ನೀಡುತ್ತಿದ್ದ ರೈನಾ ತಳ್ಳಿ ಹಾಕಿದ್ದಾರೆ. ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಮತ್ತು ರಾಜಸ್ಥಾನ ನಡುವಿನ  ಪಂದ್ಯ ಪ್ರಸಾರವಾಗುತ್ತಿದ್ದ ವೇಳೆ ಎರಡು ಪದಗಳ ಕಾಮೆಂಟ್‌ನೊಂದಿಗೆ ರೈನಾ ಪ್ರತಿಕ್ರಿಯಿಸಿ “ಖಂಡಿತವಾಗಿಯೂ ಇಲ್ಲ” ಎಂದಿದ್ದಾರೆ.

ತಮಿಳುನಾಡಿನ ಮಾಜಿ ಕ್ರಿಕೆಟಿಗ ಅಭಿನವ್ ಮುಕುಂದ್ ಅವರು ಧೋನಿಯವರ ಆತ್ಮೀಯ ಸ್ನೇಹಿತ ಸುರೇಶ್ ರೈನಾಗೆ ಪ್ರಶ್ನೆ ಕೇಳಿದರು, ಸೂಪರ್ ಕಿಂಗ್ಸ್ ತಮ್ಮ ನಿರ್ಣಾಯಕ ಪಂದ್ಯದ ಮುನ್ನಾದಿನದಂದು ತಮ್ಮ ಮಾಜಿ ನಾಯಕನ ಬಗ್ಗೆ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಾಗಿನಿಂದ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿರುವ ದೊಡ್ಡ ಪ್ರಶ್ನೆಯಾಗಿತ್ತು.  ಧೋನಿಯವರಿಂದ ನಿವೃತ್ತಿಯ ಸಂಭಾವ್ಯ ದೊಡ್ಡ ಘೋಷಣೆಯ ಬಗ್ಗೆ ಅಭಿಮಾನಿಗಳಿಗೆ ಊಹಾಪೋಹಕ್ಕೆ ಕಾರಣವಾಯಿತು. ಪಂದ್ಯದಲ್ಲಿ ಚೆನ್ನೈ ಗೆದ್ದಿದ್ದು ಪ್ಲೇ ಆಫ್ ನತ್ತ ಕಣ್ಣು ಹಾಯಿಸಿದೆ.

ಇದನ್ನೂ ಓದಿ : IPL;ಇನ್ನು ಪ್ಲೇ ಆಫ್ ಪೈಪೋಟಿ ತೀವ್ರ: ರಾಜಸ್ಥಾನ್ ವಿರುದ್ಧ ಚೆನ್ನೈಗೆ ಜಯ

Advertisement

Udayavani is now on Telegram. Click here to join our channel and stay updated with the latest news.

Next