Advertisement

ಸುರೇಶ್‌ ಕೋಟ್ಯಾನ್‌ ವೈದ್ಯಕೀಯ ನೆರವಿಗೆ ಮನವಿ

01:21 PM May 07, 2021 | Team Udayavani |

ಮುಂಬಯಿ: ರಸ್ತೆ ಅಪಘಾತಕ್ಕೊಳಗಾಗಿ ನಡೆಯಲಾಗದ ಸ್ಥಿತಿಯಲ್ಲಿರುವ ಸುರೇಶ್‌ ಬಿ. ಕೋಟ್ಯಾನ್‌ ಅವರ ಶಸ್ತ್ರಚಿಕಿತ್ಸೆಗೆ ಸಹೃದಯ ದಾನಿಗಳು ನೆರವಾಗುವಂತೆ ಮನವಿ ಮಾಡಲಾಗಿದೆ.
ಇತ್ತೀಚೆಗೆ ಕೆಲಸಕ್ಕೆಂದು ಹೊರಟು ಬಸ್‌ಗಾಗಿ ಕಾಯುತ್ತಿದ¤ ಸಂದರ್ಭ ಅತೀ ವೇಗದಿಂದ ಬಂದ ಬೈಕ್‌ ಸವಾರನೋರ್ವ ಸುರೇಶ್‌ ಕೋಟ್ಯಾನ್‌ ಅವರಿಗೆ ಢಿಕ್ಕಿ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಅವರನ್ನು ವಿಕ್ರೋಲಿ ಪೂರ್ವದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇಲ್ಲಿ ಶಸ್ತ್ರಚಿಕಿತ್ಸೆ ವ್ಯವಸ್ಥೆಯಿಲ್ಲದ ಕಾರಣ ಬಳಿಕ ಮುಲುಂಡ್‌ ಪಶ್ಚಿಮದ ಉಪಾಸಿನಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆ ನಡೆಯಿತು.

Advertisement

ಆರ್ಥಿಕವಾಗಿ ಹಿಂದುಳಿದ ಇವರ ಕುಟುಂಬವು ಅವರ ಮಿತ್ರರ ಸಹಾಯದಿಂದ ಮೊದಲ ಶಸ್ತ್ರಚಿಕಿತ್ಸೆಗೆ ಈಗಾಗಲೇ ಲಕ್ಷಾಂತರ ರೂ. ಗಳನ್ನು ವ್ಯಯಿಸಿದೆ. ಶಸ್ತ್ರಚಿಕಿತ್ಸೆ ಮಾಡಿದರೂ ಸುರೇಶ್‌ ಕೋಟ್ಯಾನ್‌ ನಡೆಯಲಾಗದೆ ಮಲಗಿದ್ದಲ್ಲೇ ಇದ್ದಾರೆ. ಅಪಘಾತದಿಂದ ಅವರ ಬೆನ್ನಿಗೆ ಗಂಭೀರ ಗಾಯವಾಗಿದ್ದು, ವೈದ್ಯರು ಇನ್ನೊಂದು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ. ಇದ್ದ ಹಣವನ್ನು ಮೊದಲ ಶಸ್ತ್ರಚಿಕಿತ್ಸೆಗೆ ಖರ್ಚು ಮಾಡಿದ್ದ ಇವರ ಪ್ರಸ್ತುತ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿದೆ.

ಮನೆಯ ಆಧಾರಸ್ತಂಭವಾಗಿದ್ದ ಪತಿಯ ಶಸ್ತ್ರಚಿಕಿತ್ಸೆಗೆ ನೆರವಾಗುವಂತೆ ಸುರೇಶ್‌ ಕೋಟ್ಯಾನ್‌ ಅವರ ಪತ್ನಿ ಮಮತಾ ಕೋಟ್ಯಾನ್‌ ಅವರು ಸಹೃದಯ ದಾನಿಗಳು, ಸಂಘ-ಸಂಸ್ಥೆಗಳ ಮೊರೆ ಹೋಗಿದ್ದಾರೆ. ನೆರವು ನೀಡಲಿಚ್ಛಿಸುವ ದಾನಿಗಳು, ಸಂಘ-ಸಂಸ್ಥೆಗಳು Mamata Suresh Kotian, ICICI Bank, A/c No : 008801016417, IFSC : ICIC0000088, Dombivili East Branch ಇಲ್ಲಿ ಜಮಾ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next