Advertisement

ಸುರೇಶ್ ಬಾಬು ಫೇಕ್ ರಾಜಕೀಯ ಬಿಡಲಿ: ಕಾಂಗ್ರೆಸ್ ಶಾಸಕ ಗಣೇಶ್ ಕಿಡಿ

11:42 AM Dec 20, 2021 | Team Udayavani |

ಕುರುಗೋಡು: ಮಾಜಿ ಬಿಜೆಪಿ ಶಾಸಕ ಸುರೇಶ್ ಬಾಬು ಅವರು ಕ್ಷೇತ್ರದಲ್ಲಿ ಫೇಕ್ ರಾಜಕೀಯ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಜೆ. ಎನ್. ಗಣೇಶ್ ಕಿಡಿಕಾರಿದ್ದಾರೆ.

Advertisement

ಪಟ್ಟಣದ ಶಾಸಕರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ಮಕ್ಕಳ ಕೈ ಯಲ್ಲಿ ಬಾವುಟ ಕೊಟ್ಟು ಪ್ರಚಾರ ಮಾಡುವುದಲ್ಲ ಕಾರ್ಯಕರ್ತರ ಸಂಖ್ಯೆ ಬಲ ತೋರಿಸಲಿ ನೋಡೋಣ. ಈಗಾಗಲೇ ಬಿಜೆಪಿ ಆಡಳಿತ ನೋಡಿ ಜನ ಬೇಸತ್ತು ಹೋಗಿದ್ದಾರೆ. ಪುರಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ರಾಜಕೀಯ ಅಂದರೆ ಶೋಕಿ ಮಾಡುವುದು ಅಲ್ಲ, ಅದು ಒಂದು ಜನ ಸೇವೆ ಎಂದರು.

ಪುರಸಭೆ ಚುನಾವಣೆಯ ಅಂಗವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ವಾರ್ಡ್ ಗಳಿಗೆ ಪ್ರಚಾರಕ್ಕೆ ತೆರಳಿದಾಗ ಜನರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಜೊತೆಗೆ ವಾರ್ಡ್ ನಲ್ಲಿ ನೀರಿನ ಸಮಸ್ಯೆ ಬಹಳ ಕಂಡು ಬರುತ್ತಿದೆ ಆದಷ್ಟು ಬೇಗ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಕಳೆದ ಬಾರಿ ಕುರುಗೋಡು ಪುರಸಭೆ ಬಿಜೆಪಿ ಅಧಿಕಾರದಲ್ಲಿ ಇತ್ತು ಆದರೂ ಪಟ್ಟಣದ ಸಮಸ್ಯೆಗಳು ಬಗೆಹರಿಸುವಲ್ಲಿ ವಿಫಲವಾಗಿದೆ. ಅಲ್ಲದೆ ಸಾರ್ವಜನಿಕರು ಫಾರಂ ನಂ.3 ಪಡೆಯಲು ನಿತ್ಯ ಕಚೇರಿಗೆ ಅಲೆದಾಡಬೇಕಾಗಿದೆ. ಆದ್ದರಿಂದ ಈ ಬಾರಿ ಪುರಸಭೆ ಕೈ ವಶಕ್ಕೆ ಪಡೆದು ಪಟ್ಟಣದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ:ಕೇಶವ ಕೃಪ ನಂಬಿ‌ ಹೋದರೆ ಅಲ್ಲೂ ಇಲ್ಲ,ಇಲ್ಲೂ ಇಲ್ಲ : ಸಿ.ಎಂ.ಇಬ್ರಾಹಿಂ ಲೇವಡಿ

Advertisement

ಈಗಾಗಲೇ ಕುರುಗೋಡಿನಿಂದ ವದ್ದಟ್ಟಿ, ಮುಷ್ಟಗಟ್ಟೆ, ಬಾದನಹಟ್ಟಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೋಟಿ ಗಟ್ಟಲೆ ಅನುದಾನ ಮಂಜೂರು ಮಾಡಲಾಗಿದೆ ಇದಕ್ಕೆ ಶೀಘ್ರವೇ ಚಾಲನೆ ದೊರಯಲಿದೆ. ಇನ್ನೂ ರಾಜ್ಯದ ಪ್ರವಾಸಿ ತಾಣಗಳಲ್ಲಿ ಒಂದಾದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಶೌಚಾಲಯ ಸೇರಿದಂತೆ ಇತರೆ ಅಭಿವೃದ್ಧಿಪಡಿಸಲು 1 ಕೋಟಿ ಅನುದಾನ ಮಂಜೂರು ಮಾಡಿಸಲಾಗಿದೆ. ಪಟ್ಟಣದಲ್ಲಿ ನಿವೇಶನ ಇಲ್ಲದ ಬಡ ಜನರಿಗೆ ನಿವೇಶನ ನೀಡಲು ಈಗಾಗಲೇ ಬೈಲೂರ್ ರಸ್ತೆಯಲ್ಲಿ ಇರುವ 15 ಎಕರೆ ಮಿಸಲಿಡಲಾಗಿದೆ. ಪಟ್ಟಣದ ಉಜ್ವಲ ಪೇಟೆ ರಸ್ತೆ ಅಭಿವೃದ್ಧಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಬಂಗಿ ಮಲ್ಲಯ್ಯ, ಕಾಂಗ್ರೆಸ್ ಮುಖಂಡ ಸಿದ್ದಪ್ಪ, ಅನಿಪ್, ಚನ್ನಬಸವರಾಜ್ ಗೌಡ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next