Advertisement

ಸುರತ್ಕಲ್‌: ಭಿನ್ನ ಕೋಮಿನಜೋಡಿ ಪೊಲೀಸರ ವಶಕ್ಕೆ

11:53 AM Jan 12, 2018 | |

ಸುರತ್ಕಲ್‌: ಕುಳಾಯಿ ಬಳಿ ಭಿನ್ನ ಕೋಮಿನ ಜೋಡಿ ಸಂಶ ಯಾಸ್ಪದವಾಗಿ ತಿರುಗುತ್ತಿದ್ದಾಗ ಬಜರಂಗದಳದ ಕಾರ್ಯಕರ್ತರು ಸುರತ್ಕಲ್‌ ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮಕ್ಕೆ  ಆಗ್ರಹಿಸಿದ್ದಾರೆ.

Advertisement

ತೋಟ ಬೆಂಗ್ರೆಯ ಸಫಾನ್‌ (21) ಹಾಗೂ ಮಂಗಳಾದೇವಿ  ಪರಿಸರದ ಯುವತಿ ಕುಳಾç ಕಾವಿನಕಲ್ಲಿನಲ್ಲಿರುವ ಯುವಕನ ಸಂಬಂಧಿಗಳ ಮನೆಗೆ ಗುರುವಾರ ಬೆಳಗ್ಗೆ  ಬಂದಿದ್ದರು.

ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಜೋಡಿಯನ್ನು ವಿಚಾರಿಸಿದರು. ಈ ಸಂದರ್ಭ ನಮ್ಮ ಕಂಪೆನಿಯ ಹಣ ಕಲೆಕ್ಷನ್‌ಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿದರು ಎನ್ನಲಾಗಿದೆ. ಮತ್ತಷ್ಟು ವಿಚಾರಿಸಿದಾಗ ಇವರು ಮಂಗಳೂರಿನ ಮಾಲ್‌ ಒಂದರಲ್ಲಿ ಕೆಲಸಕ್ಕಿದ್ದು, ಮಧ್ಯಾಹ್ನ ವೇಳೆ  ಬೈಕಿನಲ್ಲಿ ಯುವಕನ ಸಂಬಂಧಿಕರ ಮನೆಗೆ ಬಂದಿರುವುದು ಸ್ಪಷ್ಟವಾಯಿತು.

ಮನೆಯಲ್ಲಿ ಸುಳ್ಳು  ಹೇಳಿದ್ದ ಯುವತಿ !
ಯುವತಿಗೆ ಗುರುವಾರ ರಜೆ ಇತ್ತಾದರೂ ಮನೆಯಲ್ಲಿ ಬಟ್ಟೆ ಖರೀದಿಸಲು ಹೋಗುವುದಾಗಿ ಸುಳ್ಳು ಹೇಳಿ ಯುವಕನ ಜತೆ ಕುಳಾಯಿಗೆ ಬಂದಿದ್ದಳು. ಪೊಲೀಸರು ಪೋಷಕರನ್ನು ಕರೆಸಿ ವಿಚಾರಿಸಿದಾಗ ಈ ಮಾಹಿತಿ ತಿಳಿಯಿತು. ಯುವತಿಯನ್ನು ಎಚ್ಚರಿಕೆ ನೀಡಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು. ಯುವಕನ ಹೆತ್ತವರಿಗೂ ಮಾಹಿತಿ  ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next