Advertisement

ಸುರತ್ಕಲ್ :ಪರಿಚಿತ ಮಹಿಳೆಯನ್ನು ಹತ್ಯೆಗೈದು ತಾನು ಆತ್ಮಹತ್ಯೆ ಮಾಡಿಕೊಂಡ ಹೂವಿನ ವ್ಯಾಪಾರಿ

06:22 PM Nov 18, 2020 | sudhir |

ಸುರತ್ಕಲ್: ಹೂವಿನ ವ್ಯಾಪಾರಿಯೊಬ್ಬ ,ಪರಿಚಿತ ಮಹಿಳೆಯನ್ನು ಹತ್ಯೆಗೈದು ಬಳಿಕ ತಾನೂ ಅತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಸುರತ್ಕಲ್ ನಲ್ಲಿ ನಡೆದಿದೆ.

Advertisement

ಸೂರಿಂಜೆ ನಿವಾಸಿಯಾದ 41ವರ್ಷದ ಮಹಿಳೆಯನ್ನು ವಸಂತ್(36) ಹತ್ಯೆಗೈದಿದ್ದಾನೆ. ಕುಳಾಯಿ ರೈಲ್ವೆ ಬಿಡ್ಜ್ ಬಳಿ ನಿವಾಸಿಯಾದ ವಸಂತ್ ಅವಿವಾಹಿತನಾಗಿದ್ದ. ಕಳೆದ ಏಳೆಂಟು ವರ್ಷಗಳಿಂದ ಹೂವು ವ್ಯಾಪಾರ ಮಾಡುತ್ತಿದ್ದು ಕುಟುಂಬದವರ ಜೊತೆ ಇದ್ದವ ಬಳಿಕ ಮುಕ್ಕ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗಿದೆ, ಯಾವುದೋ ಕಾರಣದಿಂದ ಮಹಿಳೆಯ ಪರಿಚಯವಾಗಿತ್ತು ಎನ್ನಲಾಗಿದೆ.

ಮಂಗಳವಾರ ತಡರಾತ್ರಿ ಯಾವುದೋ ವೈಮನಸ್ಸಿನ ಕಾರಣದಿಂದ ಮಹಿಳೆಯನ್ನು ಕೊಂದು ಈತನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂಬುದರ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ.

ಸ್ಥಳಕ್ಕೆ ಎಸಿಪಿ ಬೆಳ್ಳಿಯಪ್ಪ ,ಸುರತ್ಕಲ್ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.ಮೃತದೇಹವನ್ನು ಪೋಸ್ಟ್ ಮಾರ್ಟ್ಂ ಗೆ ಕಳುಹಿಸಿಕೊಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next