Advertisement

ಗಾಂಜಾ ಮಾರಾಟ, ಸೇವನೆ; ಪೊಲೀಸ್‌ ದಾಳಿ

12:22 AM Mar 28, 2023 | Team Udayavani |

ಸುರತ್ಕಲ್‌: ಗಾಂಜಾ ಸೇವನೆ ಹಾಗೂ ಮಾರಾಟ ಮಾಡುತ್ತಿದ್ದ ತಂಡವೊಂದರ ಬಾಡಿಗೆ ಮನೆ ಮೇಲೆ ದಾಳಿ ನಡೆಸಿದ ಸುರತ್ಕಲ್‌ ಪೊಲೀಸರು 8 ಸಾವಿರ ರೂ. ಮೌಲ್ಯದ ಗಾಂಜಾ ಸಹಿತ ಆಟೋ ರಿಕ್ಷಾ, ನಾಲ್ಕು ಮೊಬೈಲ್‌ ವಶಕ್ಕೆ ಪಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಸೊತ್ತುಗಳು ವಶಕ್ಕೆ
ಗಾಂಜಾ ಮಾರಾಟಗಾರ ಮೀನ ಕಳಿಯದ ವಿಕ್ರಂ ಹಾಗೂ ಗಿರಾಕಿ ಗಳಾದ ಕೊಡಿಯಾಲಬೈಲ್‌ನ ಸತೀಶ್‌, ಹೊನ್ನಕಟ್ಟೆಯ ಸಫ‌ìರಾಜ್‌, ಬೈಕಂಪಾಡಿಯ ಅಕ್ಷಯ್‌ ಬಂಧಿತರು. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಮೌಲ್ಯ 87,470 ರೂ. ಆಗಿದೆ.

ಎಸಿಪಿ ಮನೋಜ್‌ ಕುಮಾರ್‌ ನಾಯಕ್‌ ಆದೇಶ ಮತ್ತು ನಿರ್ದೇಶನದ ಮೇರೆಗೆ ಸುರತ್ಕಲ್‌ ಠಾಣಾ ಇನ್‌ಸ್ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರ ಮಾರ್ಗದರ್ಶನದಲ್ಲಿ ಪಿ.ಎಸ್‌.ಐ. ಪ್ರದೀಪ್‌ ಟಿ.ಆರ್‌. ಮತ್ತು ಸಿಬಂದಿ ಅಣ್ಣಪ್ಪ, ಅಜಿತ್‌ ಮ್ಯಾಥ್ಯೂ, ದಿಲೀಪ್‌, ಕಾರ್ತಿಕ್‌ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್‌ ಗೋವಿಂದದಾಸ ಕಾಲೇಜು ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಒರಿಸ್ಸಾ ರಾಜ್ಯದ ಚಿಂತಾಮಣಿ, ದೂಬಾ ಎಂಬಿಬ್ಬರನ್ನು ಬಂಧಿಸಿ 3.180 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಸುರತ್ಕಲ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next