Advertisement

ಸುರತ್ಕಲ್: ಗುಡ್ಡೆಕೊಪ್ಲ ಬೀಚ್ ಬಳಿ ಡ್ರೆಜ್ಜರ್ ಕಾವಲುಗಾರನ ಶವ ಪತ್ತೆ

10:51 AM Apr 05, 2021 | Team Udayavani |

ಸುರತ್ಕಲ್: ಗುಡ್ಡೆಕೊಪ್ಲ ಬೀಚ್ ಬಳಿ ಕೆಟ್ಟು ನಿಂತಿರುವ  ಭಗವತಿ ಪ್ರೇಮ್  ಡ್ರೆಜ್ಜರ್  ಕಾವಲುಗಾರ ಓರ್ವನ ಶವ ಡ್ರೆಜ್ಜರ್ ಸಮೀಪ ಪತ್ತೆಯಾಗಿದೆ. ಮೃತ ಕಾವಲುಗಾರನನ್ನು ಉತ್ತರ ಕರ್ನಾಟಕ ಮೂಲದ ಶಂಕರ್ (ಅಂದಾಜು 32 ವ.) ಎಂದು ಗುರುತಿಸಲಾಗಿದೆ.

Advertisement

ಡ್ರೆಜ್ಜರ್ ನೋಡಿಕೊಳ್ಳಲು ಇಬ್ವರು ಕಾವಲುಗಾರರನ್ನು ಡ್ರೆಜ್ಜರ್ ಒಡೆಯಲು ಗುತ್ತಿಗೆ ಪಡೆದ ಕಂಪನಿ ನೇಮಿಸಿತ್ತು. ಎಂದಿನಂತೆ ಅವರನ್ನು  ಸ್ಥಳೀಯ ದೋಣಿ ಮೂಲಕ ಡ್ರೆಜ್ಜರ್ ನಲ್ಲಿ ಬಿಟ್ಟು ಬರಲಾಗಿತ್ತು. ರವಿವಾರ (4-4-2021) ರಾತ್ರಿ 11 ಗಂಟೆಯವರೆಗೆ ಶಂಕರ್ ಜೊತೆಗೆ ಇನ್ನೋರ್ವ ಕಾವಲುಗಾರ ಜತೆಗಿದ್ದ. ಶಂಕರ್ ಕೆಲ ದಿನಗಳ ಹಿಂದಷ್ಟೇ ಇಲ್ಲಿ ಕೆಲಸಕ್ಕೆ ನೇಮಕವಾಗಿದ್ದ ಎನ್ನಲಾಗಿದೆ.

ಶಂಕರ್  ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ವರದಿಯಾಗಿದ್ದು, ಭಾನುವಾರ ರಾತ್ರಿ 11 ಗಂಟೆಯ ನಂತರ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next