Advertisement

Surathkal; ಈಜಲು ತೆರಳಿ ಮುಳುಗಿ ಮೃತಪಟ್ಟ ಬಾಲಕರ ಕುಟುಂಬಕ್ಕೆ ಪರಿಹಾರ

01:35 AM Mar 16, 2024 | Team Udayavani |

ಸುರತ್ಕಲ್‌: ಹಳೆಯಂಗಡಿ ಬಳಿಯ ಮೇಲ್‌ಕೊಪ್ಪಲ ನಂದಿನಿ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟ ಸುರತ್ಕಲ್‌ ಶಾಲಾ ವಿದ್ಯಾರ್ಥಿಗಳಾದ ಯಶ್ವಿ‌ತ್‌, ನಿರೂಪ್‌, ಅನ್ವಿತ್‌, ರಾಘವೇಂದ್ರ ಕುಟುಂಬಕ್ಕೆ ಸರಕಾರ ದಿಂದ ಬಿಡುಗಡೆಯಾದ ತಲಾ 2 ಲಕ್ಷ ರೂ.ಗಳಂತೆ ಒಟ್ಟು 8 ಲಕ್ಷ ರೂ. ಪರಿಹಾರ ಧನದ ಚೆಕ್‌ ವಿತರಣೆ ಡಿಸಿ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

Advertisement

ಮಾಜಿ ಶಾಸಕ ಮೊದೀನ್‌ ಬಾವಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಪ್ರವಾಸದಲ್ಲಿದ್ದಾಗ ಸಂಪರ್ಕಿಸಿ ನಡೆದ ಘಟನೆಯನ್ನು ವಿವರಿಸಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಿಎಂ ವಿಶೇಷ ಪರಿಹಾರ ನಿಧಿಯಿಂದ ಪರಿಹಾರ ಧನ ಬಿಡುಗಡೆಗೆ ಮನವಿ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ಕಚೇರಿಯಿಂದ ಘಟನ ವರದಿ ಬೆಂಗಳೂರು ತಲುಪದ ಕಾರಣ ಪರಿಹಾರ ನೀಡಲು ಸಮಸ್ಯೆಯಾಗಿತ್ತು. ತತ್‌ಕ್ಷಣ ಸಂತ್ರಸ್ಥ ಕುಟುಂಬದೊಂದಿಗೆ ಬಾವಾ ತೆರಳಿ ಜಿಲ್ಲಾಧಿಕಾರಿ ಮುಗಿಲನ್‌ ಅವರಿಗೆ ಪರಿಸ್ಥಿತಿ ವಿವರಿಸಿದ ಮೇರೆಗೆ ಮುಖ್ಯಮಂತ್ರಿ ವಿಶೇಷ ಪರಿಹಾರ ನಿಧಿ ಬಿಡುಗಡೆಗೆ ಬೇಕಾದ ವರದಿಯನ್ನು ಕೇವಲ ಮೂರು ದಿನಗಳಲ್ಲಿ ಕಳುಹಿಸಿ ಪರಿಹಾರ ವಿತರಣೆ ನಡೆಸಲಾಯಿತು. ಇದೇ ಸಂದರ್ಭ ಬಡ ಕುಟುಂಬಕ್ಕೆ ಸ್ಪಂದಿಸಿದ ಸಿಎಂಗೆ ಬಾವಾ ಅವರು ಕೃತಜ್ಞತೆ ವ್ಯಕ್ತಪಡಿಸಿದರು.

ಚೆಕ್‌ ವಿತರಣೆ ಸಂದರ್ಭ ಅಪರ ಜಿಲ್ಲಾಧಿಕಾರಿ ಸಂತೋಷ್‌, ಯೋಗೀಶ್‌ ಜೆಪ್ಪು ಮತ್ತಿತರರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next