Advertisement

ಅತ್ಯಾಚಾರ ಪ್ರಕರಣ : ಅಸರಾಂ ಪುತ್ರ ನಾರಾಯಣ ಸಾಯಿ ದೋಷಿ

09:02 AM Apr 27, 2019 | Hari Prasad |

ಸೂರತ್‌: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವ ಮಾನವ ಅಸರಾಂ ಬಾಪು ಪುತ್ರ ನಾರಾಯಣ ಸಾಯಿ ಅವರನ್ನು ದೋಷಿ ಎಂದು ಸೂರತ್‌ ಸೆಷನ್‌ ನ್ಯಾಯಾಲಯ ಘೋಷಿಸಿದೆ. ಗುಜರಾತ್‌ ನ ಸೂರತ್‌ ನಲ್ಲಿ ಸಹೋದರಿಯರಿಬ್ಬರ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣದಲ್ಲಿ ನಾರಾಯಣ ಸಾಯಿ ಅವರ ಮೇಲಿನ ಆರೋಪ ಸಾಬೀತಾಗಿದೆ.

Advertisement

ಈ ಅತ್ಯಾಚಾರ ಪ್ರಕರಣದಲ್ಲಿ ನಾರಾಯಣ ಸಾಯಿ ಅವರ ಜೊತೆ ಆರೋಪಿಗಳಾಗಿದ್ದ ಗಂಗಾ, ಜಮುನಾ ಮತ್ತು ಹನುಮಾನ್‌ ಮೇಲಿನ ಆರೋಪಗಳೂ ಸಹ ಸಾಬೀತುಗೊಂಡಿದ್ದು ಈ ಮೂವರನ್ನೂ ಸಹ ನ್ಯಾಯಾಲವು ದೋಷಿಗಳು ಎಂದು ತೀರ್ಮಾನಿಸಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಇನ್ನೋರ್ವ ಮಹಿಳೆ ಮೋನಿಕಾಳನ್ನು ನ್ಯಾಯಾಲವು ಮುಗ್ದೆ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖೀಸಿದೆ. ಅಪರಾಧಿಗಳಿಗೆ ಶಿಕ್ಷೆಯ ಮಾದರಿ ಮತ್ತು ಪ್ರಮಾಣವನ್ನು ನ್ಯಾಯಾಲವು ಎಪ್ರಿಲ್‌ 30ರಂದು ಪ್ರಕಟಿಸಲಿದೆ.

ನಾರಾಯಣ ಸಾಯಿ ವೇಷ ಮರೆಸಿಕೊಂಡು ದೇಶ ಬಿಟ್ಟು ಪರಾರಿಯಾಗಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ದೆಹಲಿ ಪೊಲೀಸರಿಂದ 2013ನೇ ಇಸವಿ ಡಿಸೆಂಬರ್‌ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದ. 2013ರಲ್ಲಿ ದಾಖಲಾಗಿರುವ ಈ ಅತ್ಯಾಚಾರ ಪ್ರಕರಣದಲ್ಲಿ ನಾರಾಯಣ ಸಾಯಿ ತಂದೆ ಅಸಾರಾಂ ಬಾಪೂ ಕೂಡ ಆರೋಪಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next