Advertisement

ಅರ್ಜಿ ಸ್ವೀಕೃತ: ನೋಟಾ ಬಳಕೆ: ವಿಚಾರಣೆಗೆ ಅಸ್ತು

08:10 AM Aug 03, 2017 | Karthik A |

ಹೊಸದಿಲ್ಲಿ: ರಾಜ್ಯಸಭೆ ಚುನಾವಣೆಯಲ್ಲಿ ‘ನೋಟಾ’ (ಮೇಲಿನ ಯಾರೂ ಅಲ್ಲ) ಗುಂಡಿಯನ್ನು ಮತಯಂತ್ರದಲ್ಲಿ ಅಳವಡಿಸುವ ಕುರಿತ ಆಕ್ಷೇಪಣ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಸಮ್ಮತಿಸಿದೆ. ಗುಜರಾತ್‌ ಕಾಂಗ್ರೆಸ್‌ ಶಾಸಕರು ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ, ತಮ್ಮ ವಕೀಲ ಕಪಿಲ್‌ ಸಿಬಲ್‌ ಅವರ ಮೂಲಕ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಅರ್ಜಿ ವಿಚಾರಣೆ ನಡೆಸಲು ನ್ಯಾ| ದೀಪಕ್‌ ಮಿಶ್ರಾ ಅವರಿದ್ದ ನ್ಯಾಯಪೀಠ ಒಪ್ಪಿಕೊಂಡಿದೆ. ಅರ್ಜಿ ಸಲ್ಲಿಕೆ ವೇಳೆ ವಾದ ಮಂಡಿಸಿದ ಸಿಬಲ್‌, ನೋಟಾ ಅಳವಡಿಕೆಗೆ ಕಾನೂನುಬದ್ಧ ಅವಕಾಶವಿಲ್ಲ ಎಂದಿದ್ದಾರೆ. ಆದರೆ ಸರ್ಕಾರಿ ಅಧಿಕಾರಿಗಳ ಪ್ರಕಾರ, 2014 ಜನವರಿಯಲ್ಲಿ ರಾಜ್ಯಸಭಾ ಚುನಾವಣೆ ನಡೆದಿದ್ದಾಗ ನೋಟಾ ಅಳವಡಿಸಲಾಗಿತ್ತು. 2013ರಲ್ಲಿ ಸುಪ್ರೀಂ ಇಲೆಕ್ಟ್ರಾನಿಕ್‌ ಮತಯಂತ್ರಗಳಲ್ಲಿ ನೋಟಾ ಅಳವಡಿಕೆಗೆ ಆದೇಶಿಸಿದ್ದು, ಅದರಂತೆ ಅಳವಡಿಸಲಾಗಿತ್ತು. ಮಂಗಳವಾರವಷ್ಟೇ ನೋಟಾ ಕೈಬಿಡುವಂತೆ ಆಯೋಗಕ್ಕೆ ಕಾಂಗ್ರೆಸ್‌ ಕೋರಿತ್ತು,

Advertisement

ಬಿಜೆಪಿಯಿಂದಲೂ ಮನವಿ 
ಗುಜರಾತ್‌ ರಾಜ್ಯಸಭೆ ಚುನಾವಣೆ ವೇಳೆ ನೋಟಾಕ್ಕೆ ಅವಕಾಶ ನೀಡಬಾರದು ಎಂದು ಇದೀಗ ಬಿಜೆಪಿ ಕೂಡ ಚುನಾವಣ ಆಯೋಗಕ್ಕೆ ಮನವಿ ಮಾಡಿದೆ. ‘ರಾಜ್ಯಸಭೆ ಚುನಾವಣೆಯಲ್ಲಿ ಗೌಪ್ಯತೆ ಎಂಬುದಿಲ್ಲ. ಪಕ್ಷದ ವಿಪ್‌ ಸೂಚಿಸಿದವರಿಗೆ ಮತ ಹಾಕಬೇಕಾಗುತ್ತದೆ. ಆದ್ದರಿಂದ ನೋಟಾದ ಅಗತ್ಯ ಇರುವುದಿಲ್ಲ. ಅಲ್ಲದೇ ವಿಪ್‌ನ ಸ್ವರೂಪದ ವಿರುದ್ಧ ನೋಟಾ ಜಾರಿ ಮಾಡಿದಂತಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಮುಖ್ತರ್‌ ಅಬ್ಟಾಸ್‌ ನಖ್ವೀ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next