Advertisement

ಆರ್‌ಬಿಐ ಅನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್‌

12:45 PM Apr 27, 2019 | Team Udayavani |

ಹೊಸದಿಲ್ಲಿ: ಬ್ಯಾಂಕುಗಳ ವಾರ್ಷಿಕ ಪರಿಶೀಲನಾ ವರದಿ ಸೇರಿದಂತೆ ಕೆಲವು ಪ್ರಮುಖ ಮಾಹಿತಿಗಳನ್ನು ಬಹಿರಂಗಪಡಿಸುವುದಕ್ಕೆ ನಿರಾಕರಿ ಸಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಅನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದು ಕೊಂಡಿದೆ.ಅಲ್ಲದೆ, ಮಾಹಿತಿ ಬಹಿರಂಗಕ್ಕೆ ವಿನಾಯ್ತಿ ನೀಡಿರುವ ನಿಯಮವನ್ನು ಕೂಡಲೇ ವಾಪಸ್‌ ಪಡೆಯುವಂತೆಯೂ ಆರ್‌ಬಿಐಗೆ ಸೂಚಿಸಲಾಗಿದ್ದು, ಇದು ನಿಮಗೆ ನೀಡುತ್ತಿರುವ ಕೊನೆಯ ಅವಕಾಶ ಎಂದೂ ಕೋರ್ಟ್‌ ಎಚ್ಚರಿಸಿದೆ. ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಬ್ಯಾಂಕುಗಳ ಪರಿಶೀಲನಾ ವರದಿ ಮತ್ತಿತರ ಮಾಹಿತಿಗಳನ್ನು ನೀಡುವುದು ಆರ್‌ಬಿಐನ ಕರ್ತವ್ಯವಾಗಿದೆ. ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರ ಗಳನ್ನು ಹೊರತುಪಡಿಸಿ ಬೇರೆ ಎಲ್ಲ ಮಾಹಿತಿ ಬಹಿರಂಗಪಡಿಸಬೇಕು. ಕೂಡಲೇ ಆರ್‌ಟಿಐನಡಿ ಮಾಹಿತಿ ನೀಡಿ. ನೆಪ ಹೇಳಿಕೊಂಡು ವಿಳಂಬ ಮಾಡಿದರೆ ಗಂಭೀರ ಪರಿಣಾಮ ಎದುರಿಸ ಬೇಕಾ ಗುತ್ತದೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.

Advertisement

2015ರ ಡಿಸೆಂಬರ್‌ 16ರಂದೇ ಈ ಕುರಿತು ತೀರ್ಪು ನೀಡಿದ್ದರೂ, ಅದಕ್ಕೆ ವಿರುದ್ಧವಾಗಿ ಆರ್‌ಬಿಐ ನಡೆದುಕೊಂಡಿತ್ತು. ಆರ್‌ಟಿಐನಡಿ ಸಲ್ಲಿಸಿದ್ದ ಅರ್ಜಿಗೂ ಕ್ಯಾರೇ ಎಂದಿರಲಿಲ್ಲ. ಅಷ್ಟೇ ಅಲ್ಲ, ಕೋರ್ಟ್‌ ತನ್ನ ತೀರ್ಪಿನಲ್ಲಿ ಯಾವ್ಯಾವ ವಿಚಾರ ಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿತ್ತೋ, ಆ ಎಲ್ಲ ವಿಚಾರಗಳ ಬಹಿರಂಗಕ್ಕೂ ನಿರ್ಬಂಧ ಹೇರಿ ಹೊಸ ನೀತಿಯನ್ನು ಆರ್‌ಬಿಐ ಜಾರಿ ಮಾಡಿತ್ತು. ಇಂಥ ಯಾವ ಮಾಹಿತಿಯನ್ನೂ ಬಹಿರಂಗ ಮಾಡಬೇಡಿ ಎಂದು ವಿವಿಧ ಇಲಾಖೆಗಳಿಗೆ ಆರ್‌ಬಿಆ ನಿರ್ದೇಶಿಸಿತ್ತು. ಆರ್‌ಬಿಐನ ಈ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮಾಹಿತಿ ಬಹಿರಂಗಕ್ಕೆ ಇದು ಕೊನೇ ಅವಕಾಶ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next