Advertisement

ಕರಾಚಿಯಲ್ಲಿ ಹಿಂದೂ ಧರ್ಮಶಾಲೆ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ತಡೆ

04:04 AM Jun 15, 2021 | Team Udayavani |

ಇಸ್ಲಾಮಾಬಾದ್‌: ಹಿಂದೂ ಧರ್ಮಶಾಲೆಯನ್ನು ಧ್ವಂಸಗೊಳಿಸುವುದನ್ನು ನಿಲ್ಲಿಸಿ. ನಗರದ ಹೃದಯಭಾಗದಲ್ಲಿರುವ ಪಾರಂಪರಿಕ ಆಸ್ತಿಗಳನ್ನು ಭೋಗ್ಯಕ್ಕೆ ನೀಡುವಂತೆ ಪಾಕಿಸ್ಥಾನದ ಸುಪ್ರೀಂ ಕೋರ್ಟ್‌ ಕರಾಚಿ ಅಡಳಿತಕ್ಕೆ ತಾಕೀತು ಮಾಡಿದೆ.

Advertisement

ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್‌ ಅಹಮದ್‌ ನೇತೃತ್ವದ ತ್ರಿಸದಸ್ಯ ಪೀಠವು, ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ 2014ರ ತೀರ್ಪನ್ನು ಎತ್ತಿಹಿಡಿದಿದ್ದು, ಈ ಆದೇಶ ನೀಡಿದೆ.

ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಆಯೋಗದ ಸದಸ್ಯ ಡಾ| ರಮೇಶ್‌ ಕುಮಾರ್‌, ಕರಾಚಿಯ ಸದ್ದಾರ್‌ ನಗರದಲ್ಲಿ 716 ಚದರದಷ್ಟು ಧರ್ಮಶಾಲೆಯಿದೆ ಎಂದು ಕೆಲವು ಚಿತ್ರಗಳು, ದಾಖಲೆಗಳನ್ನು ಕೋರ್ಟ್‌ಗೆ ಹಾಜರುಪಡಿಸಿದರು. ಅಲ್ಲದೆ ಇವಾಕ್ಯೂ ಟ್ರಸ್ಟ್‌ ಪ್ರಾಪರ್ಟಿ ಬೋರ್ಡ್‌ ಈ ಆಸ್ತಿಯನ್ನು ಕೆಲವು ವ್ಯಕ್ತಿಗಳಿಗೆ ಭೋಗ್ಯಕ್ಕೆ ನೀಡಿದ್ದು, ಅವರು ಧರ್ಮಶಾಲೆಯನ್ನು ಕೆಡವಿ ವಾಣಿಜ್ಯ ಮಳಿಗೆ ನಿರ್ಮಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next