Advertisement

ತಾಜ್‌ಗೆ ಪಾಚಿ ಬಾಧೆ

06:00 AM May 10, 2018 | Team Udayavani |

ನವದೆಹಲಿ: ಪ್ರೇಮಸೌಧ ತಾಜ್‌ಮಹಲ್‌ ಪಾಚಿ ಮತ್ತು ಕೀಟದ ಬಾಧೆಯಿಂದ ನಲುಗುತ್ತಿದೆ. ಹೀಗಾಗಿ ಅದನ್ನು ರಕ್ಷಿಸುವಲ್ಲಿ ಏಕೆ ವಿಫ‌ಲರಾಗಿದ್ದೀರಿ ಎಂದು ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆ (ಎಎಸ್‌ಐ)ಯನ್ನು ಸುಪ್ರೀಂಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಅದನ್ನು ರಕ್ಷಿಸಲು ಕೈಗೊಂಡ ಕ್ರಮಗಳೇನು ಎಂದು ನ್ಯಾ.ಎಂ.ಬಿ.ಲೋಕುರ್‌ ನೇತೃತ್ವದ ಪೀಠ ಕೇಳಿದೆ.  ತನ್ನ ನಿರ್ಲಕ್ಷ್ಯವನ್ನು ಸಮರ್ಥಿಸಿಕೊಳ್ಳುವ ಇಲಾಖೆಯ ಅಗತ್ಯವಿದೆಯೇ ಎಂದು ಪರಾಮ ರ್ಶಿಸಬೇಕು ಎಂದು ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿತು. ತಾಜ್‌ ಮಹಲ್‌ ಹತ್ತಿರದ ಯಮುನಾ ನದಿಯ ಅಲ್ಲಲ್ಲಿ ನೀರು ನಿಂತಿರುವುದೇ ಕೀಟಬಾಧೆಗೆ ಕಾರಣ ಎಂದು ಎಎಸ್‌ಐ ಮಂಡಿಸಿದ ವಾದವನ್ನು ನ್ಯಾಯ ಪೀಠ ಒಪ್ಪಲಿಲ್ಲ. 

Advertisement

ಸರ್ಕಾರದ ಪರವಾಗಿ ಮಾತನಾಡಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಎನ್‌ಎಸ್‌ ನಾಡಕರ್ಣಿ, ತಾಜ್‌ಮಹಲ್‌ನ ಸಂರಕ್ಷಣೆಗೆ ಅಂತಾರಾಷ್ಟ್ರೀಯ ತಜ್ಞರ ನೆರವು ಪಡೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next