Advertisement

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಏನು ಮಾಡಿದ್ದೀರಿ?

08:44 PM Jul 06, 2023 | Team Udayavani |

ನವದೆಹಲಿ: ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳು ತಾರತಮ್ಯವಿಲ್ಲದೇ ಉನ್ನತ ಶಿಕ್ಷಣ ಪಡೆಯಲು ಏನು ಕ್ರಮ ಕೈಗೊಂಡಿದ್ದೀರಿ? ಇದು ಬಹಳ ಗಂಭೀರವಾದ ವಿಚಾರ, ಇದನ್ನು ಸರಿ ಮಾಡಲು ನೀವೇನು ಮಾಡಿದ್ದೀರಿ? ಹೀಗೆಂದು ಸರ್ವೋಚ್ಚ ನ್ಯಾಯಾಲಯವು ಯುಜಿಸಿಯನ್ನು (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಪ್ರಶ್ನಿಸಿದೆ. ಜಾತಿ ತಾರತಮ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ರೋಹಿತ್‌ ವೇಮುಲ ಮತ್ತು ಪಾಯಲ್‌ ತಡ್ವಿ ತಾಯಂದಿರ ಅರ್ಜಿಗಳ ಕುರಿತಾಗಿ ನೀವು ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ನೀಡಿ ಎಂದು ಸರ್ವೋಚ್ಚ ಪೀಠ ಕೇಳಿದೆ.

Advertisement

ಹೈದರಾಬಾದ್‌ ಕೇಂದ್ರ ವಿಶ್ವವಿದ್ಯಾಲಯದ ಪಿಎಚ್‌ಡಿ ಪದವೀಧರ, ದಲಿತ ವಿದ್ಯಾರ್ಥಿ ರೋಹಿತ್‌ ವೇಮುಲ 2016ರಲ್ಲಿ, ಮುಂಬೈನ ಟಿಎನ್‌ ಟೋಪಿವಾಲ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ಬುಡಕಟ್ಟು ವಿದ್ಯಾರ್ಥಿನಿ ಪಾಯಲ್‌ ತಡ್ವಿ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಇಬ್ಬರೂ ಜಾತಿ ಕಾರಣಕ್ಕೆ ವಿಪರೀತ ತಾರತಮ್ಯ ಎದುರಿಸಿದ್ದರು ಎಂಬ ಆರೋಪವಿದೆ.

Advertisement

Udayavani is now on Telegram. Click here to join our channel and stay updated with the latest news.

Next