Advertisement

ಅಧಿಕಾರಿಗೆ ಬೆದರಿಕೆ: ಬಿಸಿಸಿಐ ಖಜಾಂಚಿಗೆ ಸುಪ್ರೀಂ ನೋಟಿಸ್‌

06:10 AM Nov 30, 2017 | Team Udayavani |

ನವದೆಹಲಿ: ಬಿಸಿಸಿಐನ ಹಣಕಾಸು ಅಧಿಕಾರಿ ಸಂತೋಷ್‌ ರಾಂಗೆ¡àಕರ್‌ಗೆ ಖಜಾಂಚಿ ಅನಿರುದ್ಧ ಚೌಧರಿ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ಈಗ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ. ಸರ್ವೋಚ್ಚ ನ್ಯಾಯಾಲಯ ಬಿಸಿಸಿಐ ಮತ್ತು ಚೌಧರಿಗೆ ನೋಟಿಸ್‌ ಜಾರಿ ಮಾಡಿ ಇನ್ನು 2 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಜೊತೆಗೆ ಬಿಸಿಸಿಐಗೆ ನೂತನ ಸಂವಿಧಾನ ರಚನೆ ಸಂಬಂಧ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿದೆ.

Advertisement

ರಾಂಗೆ¡àಕರ್‌ ಅವರು ತಮಗೆ ಮೂರು ಬಾರಿ ಚೌಧರಿಯಿಂದ ಬೆದರಿಕೆ ಬಂದಿದೆಯೆಂದು ನ್ಯಾಯಾಲಯ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿ ವಿನೋದ್‌ ರಾಯ್‌ಗೆ ಇ-ಮೇಲ್‌ ಮಾಡಿದ್ದಾರೆ. ಅದನ್ನು ವಕೀಲ ಗೋಪಾಲ್‌ ಸುಬ್ರಹ್ಮಣ್ಯ ಉಲ್ಲೇಖೀಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೌಧರಿ ಆರೋಪವನ್ನು ಅಲ್ಲಗಳೆದಿದ್ದಾರೆ. ಇದು ನಾನು ಹಣಕಾಸು ಅವ್ಯವಹಾರವನ್ನು ಉಂಟಾಗಿರುವ ಬೆಳವಣಿಗೆಯಿರಬಹುದು. ರಾಂಗೆ¡àಕರ್‌ರನ್ನು ನಾನು ಕೆಲವು ಬಾರಿ ಅವ್ಯವಹಾರದ ಕುರಿತು ಪ್ರಶ್ನಿಸಿದ್ದೆ ಎಂದು ಚೌಧರಿ ಹೇಳಿದ್ದಾರೆ.

ಸಂವಿಧಾನ ಪುನಾರಚನೆ ವಿಚಾರಣೆ ಮುಂದೂಡಿಕೆ: ಬಿಸಿಸಿಐಗೆ ನೂತನ ಸಂವಿಧಾನ ರಚಿಸುವ ಸಂಬಂಧ ಅಧಿಕಾರಿಗಳು ತಕ್ಷಣ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿರುವ ನ್ಯಾಯಪೀಠ ವಿಚಾರಣೆಯನ್ನು ಜ.18ಕ್ಕೆ ಮುಂದೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next