Advertisement

ಶ್ರೀಶಾಂತ್‌ ನಿಷೇಧ ವಿಚಾರ: ಬಿಸಿಸಿಐಗೆ ಸುಪ್ರೀಂ ನೋಟಿಸ್‌

06:05 AM Feb 06, 2018 | Team Udayavani |

ನವದೆಹಲಿ: ಕ್ರಿಕೆಟಿಗ ಶ್ರೀಶಾಂತ್‌ ಪ್ರಕರಣದಲ್ಲಿ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ)ಗೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

Advertisement

2013ರ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ಬಿಸಿಸಿಐ ಶ್ರೀಶಾಂತ್‌ಗೆ ಆಜೀವ ನಿಷೇಧ ಹೇರಿತ್ತು. ಇದನ್ನು ಶ್ರೀಶಾಂತ್‌ ದಿಲ್ಲಿ ಅಧೀನ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು. 2 ವರ್ಷದ ಹಿಂದೆ ಅವರನ್ನು ನ್ಯಾಯಾಲಯ ಧೋಷ ಮುಕ್ತರನ್ನಾಗಿ ಮಾಡಿತ್ತು. ಆದರೆ ಬಿಸಿಸಿಐ ಮಾತ್ರ ಇವರ ಮೇಲಿನ ನಿಷೇಧವನ್ನು ಹಿಂದಕ್ಕೆ ತೆಗೆದುಕೊಂಡಿರಲಿಲ್ಲ. ಅಷ್ಟೇ ಅಲ್ಲ ಇವರು ಇತ್ತೀಚೆಗೆ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿ ನಿಷೇಧಕ್ಕೆ ಬಿಸಿಸಿಐ ಅಡ್ಡಿಪಡಿಸುತ್ತಿದೆ ಎಂದಿದ್ದರು. ಅಲ್ಲಿಯೂ ನ್ಯಾಯಾಲಯ ಶ್ರೀಶಾಂತ್‌ ಆಜೀವ ನಿಷೇಧವನ್ನು ಹಿಂದಕ್ಕೆ ರದ್ದುಗೊಳಿಸಿತ್ತು. ಆದರೆ ಬಿಸಿಸಿಐ ಅದನ್ನೂ ನಿರಾಕರಿಸಿತ್ತು. ಈ ನಡುವೆ ತನಗೆ ನ್ಯಾಯ ನೀಡಿ ಎಂದು ಶ್ರೀಶಾಂತ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ.ದೀಪಕ್‌ ಮಿಶ್ರಾ ಒಳಗೊಂಡ ತ್ರಿಸದಸ್ಯ ಪೀಠ ಬಿಸಿಸಿಐಗೆ ನಾಲ್ಕು ವಾರಗಳ ಸಮಯ ನೀಡಿದೆ. ಇದರೊಳಗೆ ಉತ್ತರ  ನೀಡುವಂತೆ ಬಿಸಿಸಿಐಗೆ ಸೂಚಿಸಿದೆ. ಬಿಸಿಸಿಐ ಪರ ಹಿರಿಯ ವಕೀಲ ಪರಾಗ್‌ ತ್ರಿಪಾಠಿ ನೋಟಿಸ್‌ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next