Advertisement

ಆಧಾರ್‌ ‘ಐಚ್ಛಿಕ’ಎಂಬ ಆದೇಶ ಊರ್ಜಿತ : ಸುಪ್ರೀಂ

01:42 AM Apr 28, 2017 | Karthik A |

ಹೊಸದಿಲ್ಲಿ: ಸರಕಾರಿ ಯೋಜನೆಗಳಿಗೆ ಆಧಾರ್‌ ಬಳಕೆ ಐಚ್ಛಿಕ ಎಂದು ಈ ಹಿಂದೆ ತಾನು ನೀಡಿರುವ ಆದೇಶ ಇನ್ನೂ ಊರ್ಜಿತದಲ್ಲಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಪ್ಯಾನ್‌ ಕಾರ್ಡ್‌ಗೆ ಆಧಾರ್‌ ಲಿಂಕ್‌ ಮಾಡಬೇಕು ಎಂದು ಕೇಂದ್ರದ ಆದೇಶ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರ ಪರ ವಾದಿಸಿದ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್‌ ಕಾಯ್ದೆ ಅಸಾಂವಿಧಾನಿಕವಾದದ್ದು ಎಂದರು. ಅದಕ್ಕೆ ಉತ್ತರಿಸಿದ ಕೇಂದ್ರದ ಪರ ವಕೀಲರು ತೆರಿಗೆ ವಂಚನೆ ತಡೆಯುವ ನಿಟ್ಟಿನಲ್ಲಿ ಇಂಥ ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next