Advertisement

Dalit ವಿದ್ಯಾರ್ಥಿಗೆ ಐಐಟಿಯಲ್ಲಿ ಸೀಟು ಕೊಡಿಸಿದ ಸುಪ್ರೀಂ ಕೋರ್ಟ್‌

01:24 AM Oct 01, 2024 | Team Udayavani |

ಹೊಸದಿಲ್ಲಿ: ನಿಗದಿತ ಕಾಲಾವಧಿಯಲ್ಲಿ ಶುಲ್ಕ ಕಟ್ಟಲು ವಿಫ‌ಲವಾದ ಕಾರಣಕ್ಕೆ ಧನ್‌ಬಾದ್‌ ಐಐಟಿಯಲ್ಲಿ ಸೀಟು ಕಳೆದುಕೊಂಡಿದ್ದ ದಲಿತ ವಿದ್ಯಾರ್ಥಿಗೆ ಸೀಟು ಕೊಡುವಂತೆ ಸುಪ್ರೀಂಕೋರ್ಟ್‌ ಸೂಚಿಸಿದೆ. ಸಂವಿಧಾನ 142ನೇ ವಿಧಿಯಡಿ ತನಗಿರುವ ಅಧಿಕಾರವನ್ನು ಬಳಕೆ ಮಾಡಿಕೊಂಡ ಸುಪ್ರೀಂ ಕೋರ್ಟ್‌ ಬಿ.ಟೆಕ್‌ ಪದವಿಗೆ ಪ್ರವೇಶ ನೀಡುವಂತೆ ಸೂಚಿಸಿದೆ.

Advertisement

“ಪ್ರತಿಭೆಯುಳ್ಳ ವಿದ್ಯಾರ್ಥಿಯೊಬ್ಬನಿಗೆ ಅನ್ಯಾಯವಾಗಬಾರದು. ಹೀಗಾಗಿ ಶುಲ್ಕ ಕಟ್ಟಿಸಿ­ಕೊಂಡು ವಿದ್ಯಾರ್ಥಿಗೆ ಅವಕಾಶ ಕೊಡಬೇಕು’ ಎಂದು ಸಿಜೆಐ ಚಂದ್ರಚೂಡ್‌ ಅವರಿದ್ದ ಪೀಠ ಹೇಳಿದೆ. ವಿದ್ಯಾರ್ಥಿ ಅತುಲ್‌ ಪ್ರವೇಶ ಪಡೆದು 17,500 ರೂ. ಶುಲ್ಕ ಪಾವತಿಸಿ, ಅದರ ವಿವರಗಳನ್ನು ನಿಗದಿತ ಅವಧಿ­ಯಲ್ಲಿ ಅಪ್‌ಲೋಡ್‌ ಮಾಡಲು ಆಗದ್ದರಿಂದ ಪ್ರವೇಶ ನಿರಾಕರಿಸಲಾಗಿತ್ತು.

ಖುಷಿಯಾಗಿದೆ

ನನಗೆ ಮತ್ತೆ ಸೀಟು ಸಿಕ್ಕಿದೆ. ತುಂಬಾ ಖುಷಿಯಾಗಿದೆ. ಹಣಕಾಸಿನ ಸಮಸ್ಯೆಯ ಕಾರಣಕ್ಕೆ ನನ್ನ ಸೀಟನ್ನು ಯಾರೂ ಕಸಿದುಕೊಳ್ಳಬಾರದು ಎಂದು ಕೋರ್ಟ್‌ ಹೇಳಿದೆ. ಹಳಿ ತಪ್ಪಿದ್ದ ರೈಲು ಮತ್ತೆ ಹಳಿ ಏರಿದೆ. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತದೆ ಎಂದು ನಾನು ಮೊದಲೇ ನಂಬಿದ್ದೆ ಎಂದು ವಿದ್ಯಾರ್ಥಿ ಅತುಲ್‌ ಕುಮಾರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next