Advertisement

Kejriwal ಅರ್ಜಿ ತುರ್ತು ವಿಚಾರಣೆಗೆ ಒಪ್ಪದ ಸುಪ್ರೀಂ

12:22 AM May 29, 2024 | Team Udayavani |

ಹೊಸದಿಲ್ಲಿ: ವೈದ್ಯಕೀಯ ಕಾರಣಗ ಳನ್ನು ನೀಡಿ ಜಾಮೀನು ಅವಧಿ ವಿಸ್ತ ರಣೆ ಕೋರಿ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾ ರಣೆ ನಡೆಸಲು ಸುಪ್ರೀಂ ಕೋ ರ್ಟ್‌ ಮಂಗಳವಾರ ನಿರಾ ಕರಿಸಿದೆ.

Advertisement

ಜೂ.1ರ ಅನಂತರ ದಿಲ್ಲಿ ಸಿಎಂಗೆ ಜಾಮೀನು ವಿಸ್ತರಿಸುವ ಬಗ್ಗೆ ಸಿಜೆಐ ತೀರ್ಮಾನಿಸಲಿದ್ದಾರೆ ಎಂದು ನ್ಯಾ|ಜೆ.ಕೆ.ಮಹೇಶ್ವರಿ ಮತ್ತು ನ್ಯಾ|ಕೆ.ವಿ. ವಿಶ್ವನಾಥನ್‌ ನೇತೃತ್ವದ ನ್ಯಾಯಪೀಠ ಕೇಜ್ರಿವಾಲ್‌ ಪರ ವಕೀಲ ಅಭಿಷೇಕ್‌ ಸಿಂ Ì ಅವರಿಗೆ ತಿಳಿಸಿತು.

ಜೂ.1ರಂದು ಕೇಜ್ರಿವಾಲ್‌ ಅವರ ಮಧ್ಯಾಂತರ ಜಾಮೀನಿನ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಇದನ್ನು 7 ದಿನಗಳ ಕಾಲ ವಿಸ್ತರಣೆ ಮಾಡಬೇಕು ಎಂದು ಕೇಜ್ರಿವಾಲ್‌ ಪರ ಅವರು ಅರ್ಜಿ ಸಲ್ಲಿಸಿದ್ದರು.

ಅಬಕಾರಿ ಕೇಸು: ಜೂ.4ಕ್ಕೆ ತೀರ್ಪು
ದಿಲ್ಲಿ ಅಬಕಾರಿ ನೀತಿಯಲ್ಲಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿ ಸಿದಂತೆ ದಿಲ್ಲಿ ಸಿಎಂ ಕೇಜ್ರಿವಾಲ್‌ ವಿರುದ್ಧ ಇ.ಡಿ. ಸಲ್ಲಿಸಿ ರುವ ಪೂರಕ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖೀ ಸಿರುವ ಅಂಶಗಳನ್ನು ಪರಿ ಗಣಿಸಬೇಕೋ ಬೇಡವೋ ಎಂಬ ಬಗ್ಗೆ ದಿಲ್ಲಿ ಕೋರ್ಟ್‌ ವಿಚಾರಣೆ ನಡೆಸಿತು. ಅಂತಿಮವಾಗಿ ತೀರ್ಪು ಕಾಯ್ದಿರಿಸಿ, ಜೂ.4ರಂದು ಆದೇಶ ಪ್ರಕಟಿಸುವುದಾಗಿ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next