Advertisement

ಕಾಲೇಜು ಅಭಿವೃದ್ದಿಗೆ ಸಹಕರಿಸಿ

09:52 AM Nov 14, 2021 | Team Udayavani |

ಕಾಳಗಿ: ಹಳೆ ವಿದ್ಯಾರ್ಥಿಗಳು ತಾವು ಕಲಿತ-ಶಾಲೆ ಕಾಲೇಜಿನ ಕಡೆ ಆಗಾಗ ಬಂದು ಹೋಗಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪ್ರಾಚಾರ್ಯ ಜಿ.ಎಸ್‌. ಮಾಲಿಪಾಟೀಲ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ದಿನಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚಿಸಿ, ಪದಾಧಿಕಾರಿಗಳನ್ನು ನೇಮಿಸಲಾಗುವುದು. ಅರ್ಹರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು.

ಪ್ರೊ| ಚಿತ್ರಶೇಖರ ನಾಗೂರ, ದೈಹಿಕ ಶಿಕ್ಷಣ ನಿರ್ದೇಶಕ ಅವಿನಾಶ ಕಂಟೀಕರ್‌, ಹಳೆಯ ವಿದ್ಯಾರ್ಥಿಗಳಾದ ಭೀಮರಾಯ ಕುಡ್ಡಳ್ಳಿ, ಆನಂದ ಸ್ವಾಮಿ, ದತ್ತು ಕೋಡ್ಲಿ, ಶರಣಬಸಪ್ಪ ನೀಲಕಂಠ, ಅನಿಲ ತಿಪ್ಪಯ್ಯ, ಶ್ರೀನಿವಾಸ, ಶಾರದಾ ಹೂಗಾರ, ಶಾಮರಾವ್‌ ಶಿವರಾಯ, ಮಂಜುನಾಥ ಕೊಳ್ಳಿ, ಉಮಾ ಮಹೇಶ್ವರಿ, ಜಯಶ್ರೀ ರಾಯಪ್ಪ, ರೇಣುಕಾ ವಿಠ್ಠಲ, ಪವಿತ್ರಾ ಮಲ್ಲಿಕಾರ್ಜುನ, ಲಕ್ಷ್ಮೀ ನಾಗಪ್ಪ, ರಾಜೇಶ್ವರಿ ಸಿದ್ಧಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next