Advertisement

ದಲಿತರ ಅಭಿವೃದ್ಧಿಗೆ ಸಹಕಾರ ನೀಡಿ

04:26 PM Apr 06, 2022 | Team Udayavani |

ಗುಳೇದಗುಡ್ಡ: ಯುವಕರಿಗೆ ಡಾ| ಬಾಬು ಜಗಜೀವನರಾಂ ಸ್ಫೂರ್ತಿಯಾಗಿದ್ದಾರೆ ಎಂದು ಉಪನ್ಯಾಸಕ ಡಾ| ರಂಗನಾಥ ಮಾದರ ಹೇಳಿದರು.

Advertisement

ಪಟ್ಟಣದಲ್ಲಿ ತಾಲೂಕು ಆಡಳಿತ ಗುಳೇದಗುಡ್ಡ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಾದಾಮಿ ಸಂಯುಕ್ತ ಆಶ್ರಯದಲ್ಲಿ ಡಾ| ಬಾಬು ಜಗಜೀವನ್‌ ರಾಮ್‌ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಮಾಜದಲ್ಲಿ ದಲಿತರ ಕಡೆಗಣನೆ ಸಲ್ಲದು. ದಲಿತ ಸಮಾಜದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು ಎಂದರು.

ಗಣ್ಯರು ಜಗಜೀವನರಾಂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ತಹಶೀಲ್ದಾರ್‌ ಆರ್‌.ಎಂ. ಬೊಮ್ಮನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ವಿ.ಆರ್‌. ಚವ್ಹಾಣ, ಯಮನಪ್ಪ ದಳಪತಿ, ಪರುಶರಾಮ ಮಾದರ, ರೆಡ್ಡಿ ನಡುವಿನಮನಿ, ವೈ.ಆರ್‌. ಹೆಬ್ಬಳ್ಳಿ, ಸಮಾಜ ಕಲ್ಯಾಣ ಇಲಾಖೆಯ ಸಂಜಯ ಮಬ್ರೂಮಕರ್‌, ಶ್ರೀನಿವಾಸ ಚಂದುಕರ, ರಂಜಾನ್‌ ನದಾಫ್‌, ಸುಜಾತಾ ಹಳ್ಳಿ, ಉಪತಹಶೀಲ್ದಾರ್‌ ವೀರೇಶ ಬಡಿಗೇರ, ಮಲ್ಲಿಕಾರ್ಜುನ ತುಪ್ಪದ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next