Advertisement

ಗ್ರಾಮದ ಸ್ವಚ್ಛತೆಗೆ ಸಹಕರಿಸಿ: ಚವ್ಹಾಣ

05:42 PM May 01, 2022 | Shwetha M |

ಚಡಚಣ: ಸ್ವಚ್ಛ ಹಾಗೂ ಸುಂದರ ಗ್ರಾಮಕ್ಕೆ ಗ್ರಾಮಸ್ಥರು ಸಹಕರಿಸಬೇಕಾದ ಅಗತ್ಯವಿದೆ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹೇಳಿದರು.

Advertisement

ಕನ್ನೂರ ಗ್ರಾಮದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ವತಿಯಿಂದ 2020-21ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಘನತಾಜ್ಯ ವಿಲೇವಾರಿ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಪಂಗೆ ಹೆಚ್ಚುವರಿ ಅನುದಾನ ನೀಡುವುದಾಗಿ ಹೇಳಿದರು.

ಕನ್ನೂರ ಗ್ರಾಪಂ ಅಧ್ಯಕ್ಷೆ ನಾಗವ್ವ ಬೆಳ್ಳುಂಡಗಿ ಮಾತನಾಡಿ, ಕಸ ವಿಲೇವಾರಿ ವಾಹನ ಬಂದಾಗ ಹಸಿ ಮತ್ತು ಒಣ ಕಸ ಹಾಕಿ ಗ್ರಾಮದ ಸ್ವಚ್ಛತೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.

ಪಿಡಿಒ ಮಂಜುಳಾ ಘಂಟಿ, ಮಾಸಿದ್ದ ಪೂಜಾರಿ, ಶಂಕರಗೌಡ ಪಾಟೀಲ, ಕಲ್ಲಪ್ಪ ಬೆಳ್ಳುಂಡಗಿ, ಕಾಮನಗೌಡ ಪಾಟೀಲ, ಈರಣ್ಣಗೌಡ ಪಾಟೀಲ, ಅಪ್ಪು ಬಂಡಿ, ಶಿವಾನಂದ ಡೊಳ್ಳಿ, ಕಾಸಿಂಸಾಬ್‌ ಮೊಸಳಿ, ಪರಶುರಾಮ ಶಹಾಪುರ, ಶಿವಾನಂದ ಬಂಡಿ, ಪಿಂಟು ಶಿಂಧೆ, ಬೀಮುರಾಯ ಶಿಂಧೆ, ಬಾಬು ಚವ್ಹಾಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next