Advertisement

ಸತ್ಯ ಪ್ರತಿಪಾದನ ಸತ್ಯಾಗ್ರಹಕ್ಕೆ ಬೆಂಬಲ

03:48 PM Jul 12, 2022 | Team Udayavani |

ಕಲಬುರಗಿ: ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಬೇಡ ಜಂಗಮ ಸತ್ಯ ಪ್ರತಿಪಾದನ ಸತ್ಯಾಗ್ರಹವನ್ನು ಬೆಂಬಲಿಸಿ ಹೈದ್ರಾಬಾದ್‌ ಕರ್ನಾಟಕ ಬೇಡ ಜಂಗಮರ ಸಮಾಜ ಸಂಸ್ಥೆ ಕಲಬುರಗಿ ನಗರ ಘಟಕ ವತಿಯಿಂದ ಸೋಮವಾರ ನಗರದ ಸಮಾಜ ಕಲ್ಯಾಣಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.

Advertisement

ಅಖೀಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಿ.ಬಿ. ಹಿರೇಮಠ ಅವರ ನೇತೃತ್ವದಲ್ಲಿ ಬೇಡ ಜಂಗಮರಿಗೆ ಎಸ್‌.ಸಿ. ಪ್ರಮಾಣ ಪತ್ರ ನೀಡಬೇಕು ಎಂದು ಆಗ್ರಹಿಸಿ ಸತ್ಯ ಪ್ರತಿಪಾದನ ಸತ್ಯಾಗ್ರಹ ನಡೆಯುತ್ತಿದೆ. ಜೂನ್‌ 30ರಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಅಂದೆ ಸಂಜೆ 6 ಗಂಟೆ ಒಳಗೆ ನ್ಯಾಯ ಒದಗಿಸುವುದಾಗಿ ಹೇಳಿದರು.

ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಡಿ.ಬಿ. ಹಿರೇಮಠ ಅವರು ಪುನಃ ಜು.7ರಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ಸತ್ಯಾಗ್ರಹಕ್ಕೆ ಪ್ರತಿಭಟನೆ ಮೂಲಕ ನಾವು ಬೆಂಬಲಿಸುತ್ತಿದೇವೆ ಎಂದು ಹೇಳಿದರು.

ಸತ್ಯಾಗ್ರಹದಲ್ಲಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಂ.ಬಿ. ಕಳ್ಳಿಮಠ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಂಭುಲಿಂಗಯ್ಯ ಮಠಪತಿ, ಕಲಬುರಗಿ ನಗರ ಘಟಕದ ಅಧ್ಯಕ್ಷ ವೀರಭದ್ರಯ್ಯ ಆರ್‌. ಮಠ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ್‌ ಸಾಲಿಮಠ, ಶಿವಲಿಂಗಯ್ಯ ಸಾವಳಗಿ, ಮಹೇಶ್ವರ ಶಾಸ್ತ್ರಿ, ಪಿಂಟು ಸ್ವಾಮಿ, ಸಾಗರ ಹಿರೇಮಠ, ಚನಬಸಯ್ಯ ನಂದಿಕೋಲ್‌ ಮಠ, ಸಿದ್ದರಾಮಯ್ಯ ಪುರಾಣಿಕ, ಚಂದ್ರ ಶೇಖರ ಸಾಲಿ ಮಠ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next