Advertisement
ಇಲ್ಲಿನ ನಗರಸಭೆಯಲ್ಲಿ ಆಶ್ರಯ ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಸಾರ್ವಜನಿಕರು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಆಡಳಿತರೂಢ ಕಾಂಗ್ರೆಸ್ ಸದಸ್ಯರು ಒಂದೊಂದು ನಿವೇಶನಕ್ಕೆ ಸುಮಾರು 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು. ಬಡವರಿಗೆ ನಿವೇಶನ ನೀಡುತ್ತೇವೆ ಎಂದು ದೇವರ ಮೇಲೆ ಪ್ರಮಾಣ ಮಾಡಿ ಎಂದು ತಮ್ಮ ಪಕ್ಷದ ನಗರಸಭಾ ಸದಸ್ಯರಿಗೆ ಕಿವಿಮಾತು ಹೇಳಿದ್ದ ಕಾಗೋಡು ತಿಮ್ಮಪ್ಪ ಅವರು ತಮ್ಮ ಮೂಗಿನ ನೇರದಲ್ಲಿಯೇ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದ್ದರೂ ಮೌನವಾಗಿರುವುದು ಅವಮಾನಕರ ಸಂಗತಿಯಾಗಿದೆ. ಕಳೆದ ಇಪ್ಪತ್ತೆದು ಮೂವತ್ತು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದ ಬಡವರಿಗೆ ನಿವೇಶನ ನೀಡದೆ ಈಚೆಗೆ ಸಾಗರಕ್ಕೆ ವಲಸೆ ಬಂದವರಿಂದ 1 ಲಕ್ಷ ರೂ., ಹಾಲಿ ನಿವೇಶನ ಮನೆ ಇದ್ದವರಿಂದ 2 ಲಕ್ಷ ರೂಪಾಯಿ ಹಣ ಪಡೆದು ಕಾಂಗ್ರೆಸ್ ಸದಸ್ಯರು ಬಡವರಿಗೆ ಸಿಗಬೇಕಾಗಿದ್ದ ನಿವೇಶನವನ್ನು ಉಳ್ಳವರಿಗೆ ನೀಡಿದ್ದಾರೆ ಎಂದರು.
ಅವರ ಅಪ್ಪನ ಮನೆಯ ಆಸ್ತಿಯಲ್ಲ. ನೊಂದವರ ಅಳಲನ್ನು ಕೇಳಲು ಸಾಧ್ಯವಾಗದೆ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ.
ಕಾಗೋಡು ಅವರ ಬೇಜವಾಬ್ದಾರಿಯೇ ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದು ಆರೋಪಿಸಿದರು. ಯಾವಾಗಲೂ ಕಾಗೋಡು ಅವರಿಗೆ ಬಡವರಿಗಿಂತ ತಮ್ಮ ಚೇಲಾಗಳ ಬಗ್ಗೆ ಹೆಚ್ಚಿನ ಒಲವು ಇರುತ್ತದೆ. ಮಂಗಳಬೀಸು ಕೈಗಾರಿಕಾ ವಸಹಾತು ಪ್ರದೇಶದಲ್ಲಿ ಸಹ ಕಾಗೋಡು ತಿಮ್ಮಪ್ಪ ಅವರು ಕೈಗಾರಿಕೆ ನಡೆಸುವವರಿಗೆ ನೀಡಬೇಕಾಗಿದ್ದ ನಿವೇಶನವನ್ನು ತಮ್ಮ ಚೇಲಾಗಳಿಗೆ ನೀಡಿದ್ದಾರೆ.
ಆಶ್ರಯ ನಿವೇಶನ ಹಂಚಿಕೆ ಸಹ ಕಾಗೋಡು ತಿಮ್ಮಪ್ಪ ಅವರ ಹತ್ತಿರದ ನಗರಸಭಾ ಸದಸ್ಯರು ಹಣ ಪಡೆದು ಮಾರಿಕೊಂಡಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗಿದೆ ಎಂದು ತಿಳಿಸಿದರು. ಮುಂದಿನ ಒಂದೆರಡು ದಿನಗಳಲ್ಲಿ ನಿವೇಶನ ವಂಚಿತ ಬಡವರ ಬೃಹತ್ ಪ್ರತಿಭಟನೆಯನ್ನು
ನಗರಸಭೆ ಎದುರಿನಲ್ಲಿ ನಡೆಸಲಾಗುತ್ತದೆ. ಹಾಲಿ ಪ್ರಕಟವಾಗಿರುವ ಆಶ್ರಯ ನಿವೇಶನ ಫಲಾನುಭವಿಗಳಲ್ಲಿ ಅರ್ಹರನ್ನು ಹೊರತುಪಡಿಸಿ ಅನರ್ಹರನ್ನು ಪಟ್ಟಿಯಿಂದ ಕೈಬಿಡಬೇಕು. ಉಳ್ಳವರಿಗೆ ನೀಡಿದ ನಿವೇಶನವನ್ನು ಹಿಂದಕ್ಕೆ ಪಡೆದು, ಅದನ್ನು ಬಡವರಿಗೆ ನೀಡಬೇಕು. ಇಲ್ಲವಾದಲ್ಲಿ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
Related Articles
Advertisement