Advertisement

ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಿ

04:40 PM Sep 13, 2020 | Suhan S |

ರಾಮನಾಥಪುರ: ಕಾವೇರಿ ನದಿ ದಂಡೆಯಲ್ಲಿದ್ದರೂ ರಾಮನಾಥಪುರಕ್ಕೆ ಶುದ್ಧ ಕುಡಿಯುವ ನೀರಿಲ್ಲದೆ ಕಲುಷಿತ ನೀರನ್ನೇ ಬಳಸಬೇಕಾದ ಪರಿಸ್ಥಿತಿ ಇದೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.

Advertisement

ಸುಮಾರು 10 ಸಾವಿರ ಜನಸಂಖ್ಯೆ ಹೊಂದಿರುವ ರಾಮನಾಥಪುರ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಹಲವು ವರ್ಷಗಳ ಹಿಂದೆ ಅಳವಡಿಸಿರುವ ಪಂಪ್‌ಹೌಸ್‌ ಹಾಗೂ ಪೈಪುಗಳು ಶಿಥಿಲವಾಗಿವೆ. ಗ್ರಾಮ ಪಂಚಾಯ್ತಿಯು ನದಿಯಿಂದ ನೀರು ಶುದ್ಧೀಕರಿಸದೇ, ಕಲುಷಿತ ನೀರು ಪೂರೈಕೆ ಮಾಡುತ್ತಿದೆ. ನದಿಯಲ್ಲಿ ಕೆಲವು ಬಾರಿ ಮಲಿನ ನೀರು ಹರಿಯುವಾಗ ಆದೇ ನೀರನ್ನು ಕುಡಿಯಬೇಕಾದ ಅನಿವಾರ್ಯ ಸ್ಥಿತಿ ರಾಮನಾಥಪುರದ ಜನರದ್ದಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಂತ್ರ ಅಳವಡಿಸಿ: ಜೀವ ನದಿ ಕಾವೇರಿಯಲ್ಲಿ ನೀರಿನ ಕೊರತೆ ಇಲ್ಲ. ಆದರೆ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಮಳೆಗಾಲದಲ್ಲಂತೂ ನದಿಯಿಂದ ಪೂರೈಕೆಯಾಗುವ ನೀರನ್ನು ಬಟ್ಟಿ ಇಳಿಸಿಕೊಂಡು ಕುಡಿಯುವ ಹೀನಾಯ ಸ್ಥಿತಿ ಇದೆ.ಆದ್ದರಿಂದ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿ ಸಮರ್ಪಕವಾಗಿ ನೀರಿನ ಪೂರೈಕೆ ಮಾಡಬೇಕೆಂದು ನಾಗರಿಕರು, ಸಂಘಸಂಸ್ಥೆಗಳು, ಸಿŒ ಶಕ್ತಿ ಸಂಘಗಳು ಜನಪ್ರತಿನಿಧಿಗಳು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಚರಂಡಿ ನೀರೂ ಸೇರುತ್ತೆ: ರಾಮನಾಥಪುರದ ಬಸವೇಶ್ವರ ವೃತ್ತ, ಕೋಟವಾಳು, ಬಿಳಗುಲಿ, ರಘುಪತಿಕೊಪ್ಪಲು, ಜನತಾಹೌಸ್‌, ಐ.ಬಿ.ಸರ್ಕಲ್‌ ರಸ್ತೆ, ಮತ್ತಿತರ ಕಡೆ ಹೋಗುವ ರಸ್ತೆಗಳ ಪಕ್ಕದಲ್ಲಿ ಹತ್ತಾರು ವರ್ಷಗಳ ಹಿಂದೆ ಅಳವಡಿಸಿರುವ ಕುಡಿಯುವ ನೀರಿನ ಪೈಪುಗಳು, ವಾಲ್‌Ìಗಳು ಕೆಲವು ಕಡೆಗಳಲ್ಲಿ ಒಡೆದುಹೋಗಿದ್ದು, ಚರಂಡಿಯ ನೀರೂ ಕುಡಿಯುವ ನೀರಿನ ಪೈಪುಗಳಲ್ಲಿ ಸೇರಿಕೊಂಡು ಕಲುಷಿತ ನೀರು ಮನೆಗಳಿಗೆ ಪೂರೈಕೆಯಾಗಿರುವ ಉದಾಹರಣೆಗಳಿವೆ ಎಂದು ದೂರಿದ್ದಾರೆ.

ಕಾವೇರಿ ನದಿಯಿಂದ ನೀರೆತ್ತುವ ಜಾಗದ ನದಿಯ ದಂಡೆಯಲ್ಲಿ ಮಾಟ-ಮಂತ್ರ ನಡೆಯುತ್ತಿವೆ. ಗ್ರಾಮ ಪಂಚಾಯ್ತಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅಲ್ಲಿ ವಾಮಾಚಾರ ಮಾಡುವುದನ್ನು ತಡೆಹಿಡಿಯಬೇಕು ಎಂದೂ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಯಂತ್ರಕ್ಕೆ ಪ್ರಸ್ತಾವನೆ : ರಾಮನಾಥಪುರಕ್ಕೆ ಶುದ್ಧ ಕುಡಿಯುವ ನೀರಿನ ಪೂರೈಕೆಯಾಗ ಬೇಕಾದರೆ ನೀರು ಶುದ್ಧೀಕರಣ ಯಂತ್ರದ ಅಳವಡಿಕೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ವತಿಯಿಂದ ಹಾಸನ ಜಿಲ್ಲಾ ಪಂಚಾಯ್ತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿಯೇ ನೀರು ಶುದ್ಧೀಕರಣ ಯಂತ್ರದ ಮಂಜೂರಾತಿ ಸಿಗುವ ವಿಶ್ವಾಸವಿದೆ ಎಂದು ಪಿಡಿಒ ವಿಜಯಕುಮಾರ್‌ ಪ್ರತಿಕ್ರಿಯಿಸಿದ್ದಾರೆ. ಕಾವೇರಿ ನದಿಯ ದಂಡೆಯಲ್ಲಿ ಮಾಟ- ಮಂತ್ರ ತಡೆ ಹಿಡಿಯುವುದು ಸೇರಿದಂತೆ ಸ್ವತ್ಛತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ರಾಮನಾಥಪುರಕ್ಕೆ ಕುಡಿಯುವ ನೀರಿನ ಕೊರತೆಯೇನೂ ಇಲ್ಲ. ಆದರೆ, ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ನೀರಿನ ಮೂಲದಿಂದ ಬಳಕೆದಾರರವರೆಗೆ ಬರುವ ಮಾರ್ಗದಲ್ಲಿ ಉಂಟಾಗಬಹುದಾದ ಸೋರಿಕೆಯಿಂದಾಗಿ ನೀರು ವ್ಯರ್ಥವಾಗುವುದರ ಜೊತೆಗೆ ಕಲುಷಿತಗೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ. ಅತಿಸಾರ, ಕರಳುಬೇನೆ, ರಕ್ತಭೇದಿ, ಕಾಲರಾ ಮುಂತಾದಕಾಯಿಲೆಗಳು ಹರಡದಂತೆ ತಡೆಯಬೇಕಾದರೆ ಶುದ್ಧಕುಡಿಯುವ ನೀರು ಪೂರೈಕೆಯಾಗಬೇಕು. ಗ್ರಾಪಂ ಶುದ್ಧ ನೀರು ಪೂರೈಕೆಗೆ ಆದ್ಯತೆ ನೀಡಬೇಕು. ಆನಂತರ ಇನ್ನಿತರೆ ಕೆಲಸಗಳನ್ನು ಮಾಡಲಿ. ಎಚ್‌.ಎಸ್‌.ಶಂಕರ್‌, ಜಿಪಂ ಮಾಜಿ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next