Advertisement

ಎಂಬಿ.ಪಾಟೀಲಗೆ ಸಿದ್ಧೇಶ್ವರ ಶ್ರೀಗಳೇ ‘ಆಧುನಿಕ ಭಗೀರಥ’ಸರ್ಟಿಫಿಕೇಟ್ ನೀಡಿದ್ದಾರೆ: ಸುನೀಲಗೌಡ

04:53 PM Aug 30, 2020 | keerthan |

ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ ಅವರನ್ನು ಆಧುನಿಕ ಭಗೀರಥ ಎಂದು ನಡೆದಾಡುವ ದೇವರೆಂದು ಖ್ಯಾತರಾದ ಸಿದ್ಧೇಶ್ವರ ಶ್ರೀಗಳೇ ಸರ್ಟಿಫಿಕೇಟ್ ನೀಡಿದ್ದಾರೆ. ಹೀಗಿರುವಾಗ ಅನ್ಯರ ಮಾತಿಗೆ ಪ್ರತಿಕ್ರಿಯೆ ನೀಡುವ ಅಗತ್ಯವೇ ಇಲ್ಲ ಎಂದು ಮೇಲ್ಮನೆ ಕಾಂಗ್ರಸ್ ಸದಸ್ಯ ಸುನಿಲ ಗೌಡ ಪಾಟೀಲ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ನೀರ, ನೀರಾವರಿ ಎಂದರೆ ಎಂ.ಬಿ.ಪಾಟೀಲ, ಎಂ.ಬಿ.ಪಾಟೀಲ ಎಂದರೆ  ನೀರು, ನೀರಾವರಿ ಎಂದು ಸಾರ್ವಜನಿಕ ಸಮಾರಂಭಗಳಲ್ಲಿ ಹಲವು ಬಾರಿ ಸರ್ಟಿಫಿಕೇಟ್ ನೀಡಿದ್ದಾರೆ. ಹೀಗಾಗಿ ಅವರಿವರ ಮಾತು ಕೇಳೋದು, ಅವರ ಮಾತಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಶಾಸಕ ನಡಹಳ್ಳಿ ಅವರನ್ನು ಕುಟುಕಿದ್ದಾರೆ.

ಎರಡು ದಿನಗಳ ಹಿಂದಷ್ಟೆ ಬಿಜೆಪಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ವಿಜಯಪುರ ಜಿಲ್ಲೆಯಲ್ಲಿ ನಿಜವಾದ ಭಗೀರಥ ಯಾರೆಂದು ಬಹಿರಂಗ ಚರ್ಚೆಯಾಗಲಿ, ದಾಖಲೆ ಸಮೇತ ನಾನು ಚರ್ಚೆಗೆ ಬರಲು ಸಿದ್ದ ಎಂದು ಎಂ.ಬಿ.ಪಾಟೀಲ ಅವರಿಗೆ ಬಹಿರಂಗ ಸವಾಲು ಎಸೆದಿದ್ದರು.

ಹೀಗಾಗಿ ಮಾಜಿ ಜಲಸಂಪನ್ಮೂಲ ಸಚಿವರಾದ ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರ ಕಿರಿಯ ಸಹೋದರ, ಮೇಲ್ಮನೆ ಸದಸ್ಯ ಸುನಿಲಗೌಡ ಮಾಧ್ಯಮಗಳ ಮೂಲಕವೇ ನಡಹಳ್ಳಿ ಅವರಿಗೆ ಎದಿರೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next