Advertisement

ಯಾದಗಿರಿಯಲ್ಲಿ ಭಣ ಭಣ

02:19 PM Jul 13, 2020 | Team Udayavani |

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ನಿತ್ಯ ಅಟ್ಟಹಾಸ ಮೆರೆಯುತ್ತಿರುವುದರಿಂದ ಜಿಲ್ಲೆಯಲ್ಲಿ ರವಿವಾರ ವಾತಾವರಣ ಭಣ ಭಣವಾಗಿತ್ತು.

Advertisement

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಲಾಕ್‌ ಡೌನ್‌ ಆದೇಶದಿಂದಾಗಿ ಬೆಳಗ್ಗೆ ಹಾಲು, ತರಕಾರಿ ಮಾತ್ರ ದೊರೆಯಿತು. ಉಳಿದೆಲ್ಲ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಜಿಲ್ಲೆಯಲ್ಲಿ ಹೆಚ್ಚಾಗಿ ಮಹಾರಾಷ್ಟ್ರದಿಂದ ಹಿಂತಿರುಗಿರುವ ಜನರಲ್ಲಿಯೇ ಕೋವಿಡ್ ಸೋಂಕು ದೃಢವಾಗುತ್ತಿತ್ತು. ಇದೀಗ ಮೂರನೇ ಹಂತಕ್ಕೆ ತಲುಪಿದೆ. ಸಮುದಾಯಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಹೀಗಾಗಿ ಜನರು ಮನೆಯಿಂದ ಹೊರ ಬರುವುದಕ್ಕೆ ಹೆದರುವ ವಾತಾವರಣ ನಿರ್ಮಾಣವಾಗಿದೆ. ಸಾರಿಗೆ ಸಂಚಾರವೂ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಮುಖ್ಯ ರಸ್ತೆಗಳೆಲ್ಲ ಸ್ತಬ್ಧವಾಗಿ ಗೋಚರಿಸಿದವು. ಇನ್ನೂ ಖಾಸಗಿ ವಾಹನಗಳ ಸಂಚಾರ ಮತ್ತು ಆಟೋ ಸಂಚಾರವೂ ಬಂದ್‌ ಆಗಿತ್ತು. ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿತ್ತು.

ಕೋವಿಡ್ ಆತಂಕದಿಂದ ತತ್ತರಿಸಿರುವ ಜನರು ಒಂದೊಪ್ಪತ್ತು ಉಪವಾಸ ಇದ್ದರೂ ಪರ್ವಾಗಿಲ್ಲ ಹೊರಹೋಗುವುದು ಬೇಡ ಎನ್ನುವ ಮನಸ್ಥಿತಿಗೆ ಹೊಂದಾಣಿಕೆಯಾಗುತ್ತಿರುವುದು ಸ್ಪಷ್ಟವಾಗಿ ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next