Advertisement

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

08:02 AM Sep 12, 2021 | Team Udayavani |

ಮೇಷ: ದೇವತಾಕಾರ್ಯಗಳಲ್ಲಿ ಭಕ್ತಿಶ್ರದ್ಧೆ. ಸರಕಾರೀವ್ಯವಹಾರ ಗಳಲ್ಲಿ ಪ್ರಗತಿ. ಸ್ವಾಸಾಮರ್ಥ್ಯದಿಂದ ಪರಿಶ್ರಮದಿಂದಕೂಡಿದ ಅಧಿಕ ಧನಾರ್ಜನೆ. ಎಲ್ಲ ಜನರಿಂದಲೂ ಗೌರವ ಆದರ ಮನ °ಣೆ ದೊರಕುವದಿನ.ವಾಕ್‌ ಚತುರತೆಯಿಂದಕೂಡಿದದಿನ.

Advertisement

ವೃಷಭ: ಸಂಪೂರ್ಣ ದೇವತಾನುಗ್ರಹದಿಂದಕೂಡಿದ ದಿನ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೂರದ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಗುರುಹಿರಿಯರ ಪ್ರೋತ್ಸಾಹ. ಆಸ್ತಿ ವಿಚಾರಗಳಲ್ಲಿ ಉತ್ತಮ ಬೆಳವಣಿಗೆ.

ಮಿಥುನ: ಹೆಚ್ಚಿದ ದೇಹಾಯಾಸ. ಪರಿಶ್ರಮದಿಂದ ಕೂಡಿದ ಕಾರ್ಯ ವೈಖರಿ. ಅನ್ಯರಿಗೆ ಸಹಾಯ ಮಾಡಲು ಹೋಗಿ ತೊಂದರೆಗೊಳಗಾಗದಿರಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಹಣಕಾಸಿನ ವಿಚಾರಗಳಲ್ಲಿ ಸಾಹಸ ಪ್ರವೃತ್ತಿ ಸಲ್ಲದು.

ಕರ್ಕ: ಆರ್ಥಿಕ ವಿಚಾರದಲ್ಲಿ ಅಧಿ ಗಮನಹರಿಸುವಿಕೆ. ಸಾಹಸ ಪ್ರವೃತ್ತಿಯಿಂದ ಕೂಡಿದ ಕಾರ್ಯ. ಹೆಚ್ಚಿದ ಜನಸಂಪರ್ಕ.ಉದ್ಯೋಗವ್ಯವಹಾರಗಳಲ್ಲಿವಾಕ್‌ಚತುರತೆಯ ನಡೆ. ಆಸ್ತಿ ವಿಚಾರಗಳಲ್ಲಿ ಗೊಂದಲ.

ಸಿಂಹ: ಅಧ್ಯಯನದಲ್ಲಿ ಆಸಕ್ತಿ. ಅನ್ಯರಲ್ಲಿ ಅವಲಂಬಿತ ರಾಗದೆ ಗಾಂಭೀರ್ಯದಿಂದ ಕೂಡಿದ ವ್ಯವಹಾರದಿಂದ ಯಶಸ್ಸು. ಆರೋಗ್ಯದಲ್ಲಿ ಸುಧಾರಣೆ. ಹಣಕಾಸಿನ ವಿಚಾರದಲ್ಲಿ ಅಜಾಗ್ರತೆಯಿಂದನಷ್ಟ ಸಂಭವ.ಗುರುಹಿರಿಯರಿಂದ ಸಂತೋಷ.

Advertisement

ಕನ್ಯಾ: ದೈಹಿಕ ಮಾನಸಿಕ ಸಂತುಷ್ಟತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಅಭಿವೃದ್ಧಿದಾಯಕ ದಿನ. ಗೌರವ ಆದರಗಳು ಲಭಿಸುವ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದಕೀರ್ತಿ.

ತುಲಾ: ಆರೋಗ್ಯವೃದ್ಧಿ.ವಿದ್ಯಾರ್ಥಿಗಳಿಗೆ ವ್ಯಾಪಾರಸ್ಥರಿಗೆ ಉದ್ಯೋಗಸ್ಥರಿಗೆ ಸರಿಯಾದ ಮನ್ನಣೆ ದೊರಕಿ ಸುಖ ಸಂತೋಷದಿಂದ ಸಂಭ್ರಮಿಸುವ ಸಮಯ. ನೂತನ ಮಿತ್ರರ ಸಮಾಗಮ.ಅವಿವಾಹಿತರಿಗೆ ಕಂಕಣಭಾಗ್ಯ ಕೂಡಿಬರುವಕಾಲ.

ವೃಶ್ಚಿಕ: ಉದಾರತೆ ಧೈರ್ಯ, ವಿವೇಚನೆ ಪರಾಕ್ರಮ ನಾಯಕತ್ವ ಗುಣದಿಂದ ಜನಮನ್ನಣೆ. ಉದ್ಯೋಗಸ್ತರಿಗೆ ವ್ಯವಹಾರಸ್ಥರಿಗೆ ಪ್ರಗತಿ. ಎಲ್ಲರ ಪ್ರೀತಿ ಸಂಪಾದಿಸುವ ಸಮಯ. ನಿರೀಕ್ಷಿತಧನ ಸಂಪಾದನೆ ಪ್ರಗತಿ. ಅವಿವಾಹಿತರಿಗೆ ಕಂಕಣ ಭಾಗ್ಯ.

ಧನು: ಆರೋಗ್ಯ ವಿಚಾರದಲ್ಲಿ ಗಮನಹರಿಸಿ. ಗುರುಹಿರಿಯರೊಂದಿಗೆ ತಾಳ್ಮೆ ಸಮಾಧಾನದಿಂದ ವ್ಯವಹರಿಸಿ. ಪ್ರಯಾಣದಿಂದ ಶುಭಫ‌ಲ. ವ್ಯಾಪಾರವಹಿವಾಟು ಉದ್ಯೋಗನಿರತರಿಗೆ ತೃಪ್ತಿದಾಯಕ ದಿನ.

ಮಕರ: ಪರರಿಗೆ ಸಹಾಯ ಮಾಡುವಾಗ ಪೂರ್ವಾಪರ ವಿಚಾರ ತಿಳಿದು ಕಾರ್ಯ ನಿರ್ವಹಿಸಿ. ದೂರ ಪ್ರಯಾಣ ಅನುಕೂಲಕಾರಿಯಾಗಲಾರದು. ಖರ್ಚಿನಲ್ಲಿ ಹಿಡಿತವಿರಲಿ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಸಫ‌ಲತೆ.

ಕುಂಭ: ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರೀತು. ನೂತನ ಮಿತ್ರರ ಸಂಪರ್ಕವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಪ್ರಗತಿ. ಪ್ರಯಾಣಲಾಭಕರ.ಘರ್ಷಣೆಗೆ ಅವಕಾಶ ನೀಡದಿರಿ.

ಮೀನ: ಮಾನಸಿಕ ಆರೋಗ್ಯ ಸದೃಢವಾಗಿದ್ದರೂ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿ ಗಳಿಗೆ ಅನುಕೂಲಕರ ಪರಿಸ್ಥಿತಿ. ನಿರಂತರ ಧನಾರ್ಜನೆ. ಆಲೋಚನೆಗೆ ತಕ್ಕಂತೆಕಾರ್ಯ ನಿರ್ವಹಿಸಿ ಸಫ‌ಲತೆ.

Advertisement

Udayavani is now on Telegram. Click here to join our channel and stay updated with the latest news.

Next