Advertisement

Lok Sabha Election: ದಿಲ್ಲಿಗೆ ಸುಮಲತಾ: ಇಂದು ನಡ್ಡಾ ಜತೆ ಮಾತುಕತೆ

12:04 AM Mar 18, 2024 | Team Udayavani |

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ರವಿವಾರ ಮಧ್ಯಾಹ್ನ ದಿಢೀರನೆ ದಿಲ್ಲಿಗೆ ತೆರಳಿದ್ದು, ಸೋಮವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ.

Advertisement

ಶನಿವಾರವಷ್ಟೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ| ಸಿ.ಎನ್‌. ಮಂಜುನಾಥ್‌ ಅವರೊಂದಿಗೆ ತೆರಳಿದ್ದ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ನಮಗೆ ಮಂಡ್ಯವೇ ಇರಲಿ, ಸುಮಲತಾರಿಗೇ ಚಿಕ್ಕಬಳ್ಳಾಪುರ ಕೊಡಿ. ನಾವೂ ನಿಂತು ಗೆಲ್ಲಿಸಿಕೊಡುತ್ತೇವೆ ಎಂದಿದ್ದಾರೆ.

ಇದರ ಬೆನ್ನಲ್ಲೇ ಮಂಡ್ಯ ಕ್ಷೇತ್ರಕ್ಕೆ ಪಟ್ಟು ಹಿಡಿದು ಕುಳಿತಿರುವ ಸುಮಲತಾರಿಗೆ ಬಿಜೆಪಿ ವರಿಷ್ಠರು ಬುಲಾವ್‌ ನೀಡಿದ್ದು, ರವಿವಾರ ಮಧ್ಯಾಹ್ನವೇ ದಿಲ್ಲಿ ತಲುಪಿದ್ದಾರೆ. ಸೋಮವಾರ ಬೆಳಗ್ಗೆ ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ.

ಮಂಗಳವಾರ ಬಿಜೆಪಿ ಪಟ್ಟಿ ಬಿಡುಗಡೆ?
ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ, 8 ಕ್ಷೇತ್ರಗಳನ್ನು ಬಾಕಿ ಇಟ್ಟುಕೊಂಡಿರುವ ಬಿಜೆಪಿ, ರವಿವಾರ ರಾತ್ರಿ ವೇಳೆಗೆ ಪಟ್ಟಿ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು. ಆದರೆ ಶನಿವಾರ ಕುಮಾರಸ್ವಾಮಿ- ಅಮಿತ್‌ ಶಾ ಭೇಟಿ ಹಾಗೂ ಸೋಮವಾರ ಜೆ.ಪಿ. ನಡ್ಡಾ- ಸುಮಲತಾ ಭೇಟಿಗಳ ಹಿನ್ನೆಲೆಯಲ್ಲಿ ಮಾ.19ರ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next