Advertisement
ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಸುಬ್ರಹ್ಮಣ್ಯ-ಬಿಸಿಲೆ ಘಾಟಿ ಮೂಲಕ ಕೇರಳಕ್ಕೆ ತೆರಳುತ್ತಿದ್ದ ಸಂದರ್ಭ ಬಂಧಿಸಲಾಗಿದೆ. ನಾಪತ್ತೆಯಾಗಲು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರು, ಹತ್ಯೆ ನಡೆಸಲು ಬಳಸಿದ ಮೂರು ನಾಡ ಕೋವಿ, ಒಂದು ಕತ್ತಿ, ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ.
Related Articles
Advertisement
ಒಂದೇ ತಂಡವಾಗಿತ್ತು..!ಶಂಕಿತ ಆರೋಪಿಗಳೆಂದು ಗುರುತಿಸಲ್ಪಟ್ಟ ವ್ಯಕ್ತಿಗಳು ಒಂದು ಕಾಲದಲ್ಲಿ ಸಂಪತ್ಕುಮಾರ್ ಅವರ ಆಪ್ತ ವಲಯದಲ್ಲೇ ಗುರುತಿಸಿಕೊಂಡವರು. ಹತ್ಯೆಯಾದ ವ್ಯಕ್ತಿ, ಬಂಧನದ ಆರೋಪಿಗಳು ಕೆಂಪು ಕಲ್ಲು, ಮರಳು ಮಾರಾಟ ವ್ಯವಹಾರದಲ್ಲಿ ನಿರತರಾಗಿದ್ದರು. ವ್ಯವಹಾರ ನಡುವಿನ ದ್ವೇಷ ಅಥವಾ ಬೇರೆ ಕಾರಣ ಘಟನೆಗೆ ಕಾರಣ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಕಳಗಿ ಕೊಲೆಗೆ ಪ್ರತೀಕಾರ
ವರ್ಷದ ಹಿಂದೆ ನಡೆದ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಕೊಲೆ ಪ್ರಕರಣದಲ್ಲಿ ಸಂಪತ್ ಕುಮಾರ್ ಪ್ರಮುಖ ಆರೋಪಿಯಾಗಿದ್ದ. ಇದೇ ಕಾರಣದಿಂದ ಸಂಪತ್ನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಅ. 8ರಂದು ಹತ್ಯೆ ನಡೆಸಿದ ಸಂದರ್ಭದಲ್ಲಿ ಕೂಡ ಆರೋಪಿಗಳು ಕಳಗಿ ಕೊಲೆಗೆ ಪ್ರತೀಕಾರ ಎಂದು ಕೃತ್ಯ ನಡೆದ ಮನೆ ಮಂದಿಯ ಬಳಿ ಹೇಳಿಕೊಂಡಿದ್ದರು.