Advertisement
ನಗರದಿಂದ ಒಂದು ಕಿ.ಮೀ. ದೂರದ ಕಾಯರ್ತೋಡಿ ಬಳಿ 3 ಎಕರೆ ಜಾಗದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನೂತನ ಸಾರಿಗೆ ಡಿಪೋ ನಿರ್ಮಾಣಗೊಂಡಿದೆ. ಅದ್ದೂರಿ ಉದ್ಘಾಟನೆಯೂ ನಡೆದಿದೆ. ಆಗ ಸಹಜವಾಗಿಯೇ ಸುಳ್ಯದ ಜನತೆ ಸಂಭ್ರಮಪಟ್ಟಿದ್ದರು. ಗ್ರಾಮೀಣ ಪ್ರದೇಶಗಳ ಸಾರಿಗೆ ಸಮಸ್ಯೆ ನಿವಾರಣೆ ಆಗಬಹುದೆಂದು ಆಶಾ ಭಾವನೆ ಹೊಂದಿದ್ದರು. ಉದ್ಘಾಟನೆಯಾಗಿ ವರ್ಷ ಸಮೀಪಿಸುತ್ತಿದೆ. ಸಂಚಾರ ವ್ಯವಸ್ಥೆಯಲ್ಲಿ ಇನ್ನು ಹೇಳಿಕೊಳ್ಳುವ ಬದಲಾವಣೆ ಆಗಿಲ್ಲ. ಅಂದು ಖುಷಿಯಿಂದ ಸ್ವಾಗತಿಸಿದ ಜನರ ಆಸೆಗೀಗ ತಣ್ಣೀರು ಬಿದ್ದಿದೆ.
Related Articles
Advertisement
ಕಾಯರ್ತೋಡಿಯಲ್ಲಿ ಹೊಂದಿರುವ ಡಿಪೋ 50 ಬಸ್ಗಳು ನಿಲ್ಲುವ ಸಾಮರ್ಥ್ಯ ಹೊಂದಿದೆ. ಮುಖ್ಯ ಕಟ್ಟಡ, ಶೌಚಾಲಯ, ಸ್ಯಾನಿಟರಿ, ಇಂಧನ ಕೊಠಡಿ, ಭದ್ರತೆ ಶಾಖೆ, ಬಸ್ ದುರಸ್ತಿ ವಿಭಾಗ, ಆಯಿಲ್ ಕಿಯೋಸ್ಕ್, ವಾಹನ ಪಾರ್ಕಿಂಗ್, ತಡೆಗೋಡೆ ವ್ಯವಸ್ಥೆಗಳಿವೆ. ಮುಂದೆ ವಿಶ್ರಾಂತಿ ಕೊಠಡಿ ಹಾಗೂ ಸಿಬಂದಿ ವಸತಿಗೃಹ ನಿರ್ಮಾಣಗೊಳ್ಳಲಿಕ್ಕಿದೆ.
ಬದಲಾವಣೆ ಆಗಿಲ್ಲಸುಳ್ಯ-ಪುತ್ತೂರು ನಡುವೆ ಬೆಳಗ್ಗೆ 6ರಿಂದ ರಾತ್ರಿ 8.30ರ ತನಕ ಪ್ರತಿ 15 ನಿಮಿಷಕ್ಕೆ ಒಂದು ಬಸ್ ಸಂಚರಿಸುತ್ತಿದೆ. ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಪುತ್ತೂರು ಹಾಗೂ ಕೇರಳ ಭಾಗಕ್ಕೆ ಬಸ್ಗಳ ವ್ಯವಸ್ಥೆಯಿದೆ. ಗ್ರಾಮೀಣ ಭಾಗದ ಸಾರಿಗೆ ಸ್ಥಿತಿ ಮಾತ್ರ ಕಿಂಚಿತ್ತೂ ಸುಧಾರಿಸಿಲ್ಲ. ಹೆಚ್ಚುವರಿ ಬಸ್ಗೆ ಬೇಡಿಕೆಯಿದೆ
ಗ್ರಾಮಾಂತರ ಪ್ರದೇಶಗಳಾದ ಉಬರಡ್ಕ, ಕೋಲ್ಚಾರು, ಚೊಕ್ಕಾಡಿ, ಬೆಳ್ಳಾರೆ- ಸುಬ್ರಹ್ಮಣ್ಯ, ಗುತ್ತಿಗಾರು, ಕಂದ್ರಪ್ಪಾಡಿ, ಮಂಡೆಕೋಲು, ಸಂಪಾಜೆ, ಪೇರಾಲು, ಕೊಲ್ಲಮೊಗ್ರು, ಮರ್ಕಂಜ ಮಡಪ್ಪಾಡಿ ಬಸ್ ಓಡಾಟವಿದೆ. ಬೆಳ್ಳಾರೆ, ಗುತ್ತಿಗಾರು, ಸುಬ್ರಹ್ಮಣ್ಯ ಭಾಗದ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಬೇಡಿಕೆ ಇದೆ. ಹಂತಹಂತವಾಗಿ ಕ್ರಮ
ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಈ ಮಾರ್ಗಗಳಲ್ಲಿ ಬಸ್ ಓಡಾಟ ಹಿಂದಿಗಿಂತ ಹೆಚ್ಚಳವಾಗಿದೆ. ಇತರೆಡೆಗಳಿಗೆ ವ್ಯವಸ್ಥೆಗಳು ಹಂತಹಂತವಾಗಿ ಆಗಲಿವೆ. ಆದಾಯ ಸಂಗ್ರಹ ಹಾಗೂ ಸಿಬಂದಿ ಸಮಸ್ಯೆ ಇದೆ.
– ವಸಂತ್ ನಾಯಕ್
ಘಟಕ ವ್ಯವಸ್ಥಾಪಕ, ಸುಳ್ಯ ಖಾಸಗಿಗೆ ಮೊರೆ ಅನಿವಾರ್ಯ
ಗ್ರಾಮೀಣ ಭಾಗಕ್ಕೆ ಸಾಕಷ್ಟು ಬಸ್ ವ್ಯವಸ್ಥೆ ಕಲ್ಪಿಸಬೇಕು, ಸರಕಾರಿ ಬಸ್ನ ವ್ಯವಸ್ಥೆ ಇದ್ದಲ್ಲಿ ಜನ ಅದನ್ನೇ ಆಶ್ರಯಿಸಿ ಪ್ರಯಾಣಿಸುತ್ತಾರೆ. ಅದು ಕೈ ಕೊಟ್ಟಾಗ ಖಾಸಗಿ ವಾಹನಗಳ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ.
– ಯೋಗೀಶ ಮಡಪ್ಪಾಡಿ,
ನಾಗರಿಕ ಬಾಲಕೃಷ್ಣ ಭೀಮಗುಳಿ