Advertisement

Sulya: ಒಟಿಪಿ ಇಲ್ಲದೇ ವಂಚಿಸಿದರು!

11:43 PM Aug 04, 2024 | Team Udayavani |

ಸುಳ್ಯ: ಒಟಿಪಿ ಕೇಳದೆ, ಫೋನ್‌ ಮಾಡದೇ, ಲಿಂಕ್‌ ತೆರೆಯದೇ ಬ್ಯಾಂಕ್‌ ಖಾತೆಯಿಂದ ಬೇರೊಂದು ಖಾತೆಗೆ ಹಣ ವರ್ಗಾವಣೆಗೊಂಡಿದ್ದು, ಇದರಿಂದ ವ್ಯಕ್ತಿಯೊಬ್ಬರು 1.14 ಲಕ್ಷ ರೂ. ವಂಚನೆಗೊಳಗಾಗಿದ್ದು, ಠಾಣೆಗೆ ದೂರು ನೀಡಿದ್ದಾರೆ.

Advertisement

ಪುತ್ತೂರಿನ ಹೊಟೇಲ್‌ವೊಂದರ ಕಾರ್ಮಿಕ ಕನಕಮಜಲಿನ ಅಬ್ದುಲ್ಲಾ ಅವರು ವಂಚನೆಗೊಳಗಾದವರು. ಆ. 1ರಂದು ಅಬ್ದುಲ್ಲಾ ಅವರ ಮೊಬೈಲ್‌ ನೆಟ್‌ವರ್ಕ್‌ ಏಕಾಏಕಿ ಬಂದ್‌ ಆಗಿತ್ತು. ಬಳಿಕ ವೈಫೆ„ ಕನೆಕ್ಟ್ ಮಾಡಿ ಮೊಬೈಲ್‌ ಪರಿಶೀಲನೆ ವೇಳೆ ಸಂಶಯಗೊಂಡು ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಆ. 1 ಹಾಗೂ ಆ. 2ರಂದು ಅವರ ಖಾತೆಯಿಂದ ಅರ್ಧ ಗಂಟೆಗೆ 5 ಸಾವಿರದಂತೆ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿತ್ತು.

ಒಟ್ಟು 1,14,466 ಲಕ್ಷ ರೂಪಾಯಿ ಹಣ ಅಬ್ದುಲ್ಲಾ ಅವರಿಗೆ ತಿಳಿಯದೇ ಅವರ ಖಾತೆಯಿಂದ ಬೇರೊಂದು ಖಾತೆಗೆ ವರ್ಗಾವಣೆಗೊಂಡಿದೆ. ಈ ಬಗ್ಗೆ ಅಬ್ದುಲ್ಲಾ ಅವರು ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next