Advertisement

ಸುಲ್ತಾನ್‌ಪುರ ಸ್ಥಳಾಂತರಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ

01:25 PM May 09, 2022 | Team Udayavani |

ಬಳ್ಳಾರಿ: ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ತಾಲೂಕಿನ ಸಂಡೂರು ತಾಲೂಕು ಸುಲ್ತಾನ್‌ಪುರ ಗ್ರಾಮವನ್ನು ವಿವಿಧ ರೀತಿಯ ಸೌಲಭ್ಯಗಳು ಲಭ್ಯವಿರುವ ಕುರೇಕುಪ್ಪ ಗ್ರಾಮದ ಬಳಿಗೆ ಸ್ಥಳಾಂತರಿಸಲು ಸ್ಥಳ ಗುರುತಿಸಲು ಸಹಾಯಕ ಆಯುಕ್ತರಿಗೆ ವಿಧಾನಪರಿಷತ್‌ ಸದಸ್ಯ ವೈ.ಎಂ. ಸತೀಶ್‌ ಭಾನುವಾರ ಸೂಚಿಸಿದ್ದಾರೆ.

Advertisement

ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು, ಗ್ರಾಮದಲ್ಲಿ ಕಾಲ್ನಡಿಗೆ ಮೂಲಕ ಒಂದು ಸುತ್ತು ಹಾಕಿ ಪರಿವೀಕ್ಷಣೆ ಮಾಡಿದರು. ಬಳಿಕ ಗ್ರಾಮ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರೊಂದಿಗೆ ಮಾತನಾಡಿದ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಗ್ರಾಮ ಸ್ಥಳಾಂತರವೊಂದೇ ಪರಿಹಾರವಾಗಿದೆ. ಈ ಬಗ್ಗೆ ಸರ್ಕಾರ, ಕಂಪನಿಗಳು ನಿಮಗೆ ಬೇಕಾದ ಎಲ್ಲ ರೀತಿಯ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧವಾಗಿವೆ. ತಾವೆಲ್ಲರೂ ಒಟ್ಟಾಗಿ ಸರ್ಕಾರದ ಸರ್ವೆಕಾರ್ಯ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಗರಿಷ್ಠ ಸಹಕಾರ ಮಾಡಿ ಈ ಯೋಜನೆಯ ಗರಿಷ್ಠ ಲಾಭ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಅದಕ್ಕೆ ಗ್ರಾಮಸ್ಥರು ನಮನ್ನು ತುಮಟಿ ಹಾಗೂ ಕುಡತಿನಿಗೆ ಸ್ಥಳಾಂತರಿಸುವುದಾದರೆ ಬೇಡವೇ-ಬೇಡ, ಕುರೆಕುಪ್ಪ ಪುರಸಭೆ ವ್ಯಾಪ್ತಿಯ ಹೊಸಪೇಟೆ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಸ್ಥಳಾಂತರಿಸುವುದು ಸೂಕ್ತ ಮತ್ತು ಗ್ರಾಮದ ಮನೆಗಳಿಗೆ ಹಾಗೂ ರೈತರ ಜಮೀನಿಗೆ ಗರಿಷ್ಠ ಬೆಲೆ ಕೊಡಿಸಬೇಕೆಂಬ ಮನವಿಯನ್ನು ಮಾಡಿದರು.

ತಕ್ಷಣ ಸತೀಶ್‌ ಅವರು ಕೂಡಲೇ ಸಹಾಯಕ ಆಯುಕ್ತರಿಗೆ ಕರೆ ಮಾಡಿ ಗ್ರಾಮಸ್ಥರ ಬೇಡಿಕೆಗೆ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು. ಗ್ರಾಮದ ಮನೆಗಳಿಗೆ ಹಾಗೂ ರೈತರ ಜಮೀನುಗಳಿಗೆ ಸರ್ಕಾರ ಮತ್ತು ಕೈಗಾರಿಕೆಗಳಿಂದ ಗರಿಷ್ಟ ಬೆಲೆ ಕೊಡಿಸುವುದಾಗಿ ಭರವಸೆ ನೀಡಿದರು. ಬಳಿಕ ಗ್ರಾಮದ ಮುಖ್ಯರಸ್ತೆಮೂಲಕ ಬಸ್‌ ನಿಲ್ದಾಣ, ಕುಡಿಯುವ ನೀರಿನ ಘಟಕ ವೀಕ್ಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next