Advertisement

ತಹಶೀಲ್ದಾರ್‌ ಕುಂಞಿ ಅಹಮ್ಮದ್‌ ಐದೇ ತಿಂಗಳಲ್ಲಿ ವರ್ಗಾವಣೆ

11:35 PM Jul 20, 2019 | sudhir |

ಸುಳ್ಯ : ಸುಳ್ಯ ತಹಶೀಲ್ದಾರ್‌ ಎನ್‌.ಎ. ಕುಂಞಿ ಅಹಮ್ಮದ್‌ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಿ ಆದೇಶ ನೀಡಲಾಗಿದೆ.

Advertisement

2019 ಫೆಬ್ರವರಿಯಲ್ಲಿ ಸುಳ್ಯಕ್ಕೆ ತಹಶೀಲ್ದಾರ್‌ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಐದೇ ತಿಂಗಳಲ್ಲಿ ವರ್ಗಾವಣೆಗೊಂಡಿದ್ದಾರೆ. ತನ್ನ ಕಾರ್ಯ ವೈಖರಿಯಿಂದ ಜನಮನ್ನಣೆಗೆ ಪಾತ್ರರಾಗಿದ್ದ ಕುಂಞಿ ಅಹಮ್ಮದ್‌ ಅವರ ದಿಢೀರ್‌ ವರ್ಗಾವಣೆ ಕುರಿತಂತೆ ವ್ಯಾಪಕ ಅಸಮಾಧಾನಕ್ಕೂ ಕಾರಣವಾಗಿದೆ.

ಜನಪರ ಮತ್ತು ಜನಸ್ನೇಹಿ ಅಧಿಕಾರಿ ಆಗಿ ಸಾರ್ವಜನಿಕರ ದೂರಿಗೆ ತಕ್ಷಣ ಸ್ಪಂದಿಸುವ ಅವರ ನಡವಳಿಕೆ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಕಳೆದ ಐದು ತಿಂಗಳಲ್ಲಿ ಅನೇಕ ಸಮಸ್ಯೆಗಳಿಗೆ ಅವರು ಪರಿಹಾರ ಒದಗಿಸಿದ್ದರು. ಸ್ವಚ್ಛ ಸುಳ್ಯಕ್ಕಾಗಿ ಪ್ರತಿ ವಾರ ಸ್ವಚ್ಛತಾ ಕಾರ್ಯದಲ್ಲಿ ಖುದ್ದು ತೊಡಗಿಸಿಕೊಂಡಿದ್ದರು. ಹೀಗಾಗಿ ವರ್ಷ ತುಂಬುವ ಮೊದಲೇ ವರ್ಗಾಯಿಸಿ ರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ತಹಶೀಲ್ದಾರ್‌ ಅವರನ್ನು ಸುಳ್ಯದಲ್ಲೇ ಉಳಿಸುವಂತೆ ಸಂದೇಶ ಹರಿದಾಡುತ್ತಲಿದೆ.

Advertisement

Udayavani is now on Telegram. Click here to join our channel and stay updated with the latest news.

Next