Advertisement

ಸುಳ್ಯ :ಬಸ್ ಢಿಕ್ಕಿಯಾಗಿ ನಿವೃತ್ತ ಶಿಕ್ಷಕಿ ಸಾವು

10:25 AM Oct 20, 2019 | Team Udayavani |

ಸುಳ್ಯ : ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸುಳ್ಯ ನಗರದ ಹಳೆಗೇಟು ವಿದ್ಯಾನಗರ ಬಳಿ ಬಸ್ ಢಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಸಂಭವಿಸಿದೆ.

Advertisement

ಮೃತರನ್ನು ನಿವೃತ್ತ ಶಿಕ್ಷಕಿ ಮೀನಾಕ್ಷಿ ಟೀಚರ್ ಎಂದು ಗುರುತಿಸಲಾಗಿದೆ.

ನಿವೃತ್ತ ಶಿಕ್ಷಕಿ ಮೀನಾಕ್ಷಿ ಟೀಚರ್ ಪತಿ ಹರಿಪ್ರಸಾದ್‌ ಅವರೊಂದಿಗೆ ಮಂಡೆಕೋಲು ಬೊಳುಗಲ್ಲಿನ ಪತಿಯ ಮನೆಗೆ ಪೂಜೆಗೆ ತೆರಳಿ ಹಳೆಗೇಟು ವಿದ್ಯಾನಗರದಲ್ಲಿರುವ ಮನೆಗೆ ಹಿಂತಿರುಗುತ್ತಿದ್ದ‌ ವೇಳೆ ಈ ದುರ್ಘಟನೆ ಸಂಭವಿಸಿದೆ. ವಿದ್ಯಾನಗರದಲ್ಲಿ ವಾಹನದಿಂದಿಳಿದು ರಸ್ತೆ ದಾಟುತ್ತಿರುವಾಗ ಪೈಚಾರು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸರಕಾರಿ ಬಸ್ ಢಿಕ್ಕಿ ಹೊಡೆದಿದೆ.ಮೀನಾಕ್ಷಿ ಟೀಚರ್ ಸ್ಥಳದಲ್ಲೇ ಕೊನೆಯುಸಿರೆಳೆದರು.

ಮೃತ ಶಿಕ್ಷಕಿ ಅಯ್ಯನಕಟ್ಟೆ ಶಾಲೆಯಲ್ಲಿ ಶಿಕ್ಷಕಿಯಾಗಿ 5 ವರ್ಷದ ಹಿಂದೆ ನಿವೃತ್ತಿಯಾಗಿದ್ದರು. ಸುಳ್ಯ ತಾಲೂಕಿನ ಶಾಂತಿನಗರ, ಕೊಯಿಕುಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದರು.

ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Advertisement

ಮೃತರು ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next