Advertisement

Sullia ಉಬರಡ್ಕ: ಕೆರೆಗೆ ಬಿದ್ದು ಯುವಕ ಸಾವು

12:22 AM Mar 09, 2024 | Team Udayavani |

ಸುಳ್ಯ: ಕೆಲಸಕ್ಕೆ ತೆರಳಿದ್ದ ಯುವಕನೋರ್ವ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಉಬರಡ್ಕದಲ್ಲಿ ಮಾ. 8ರಂದು ಸಂಭವಿಸಿದೆ.

Advertisement

ಸುಳ್ಯ ಶಾಂತಿನಗರ ನಿವಾಸಿ ದಿ| ನಾರಾಯಣ ಮುಕರಿ ಅವರ ಪುತ್ರ ಯೋಗೀಶ್‌ (36) ಮೃತರು. ಯೋಗೀಶ್‌ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು, ಅವರು ಉಬರಡ್ಕಕ್ಕೆ ವ್ಯಕ್ತಿಯೋರ್ವ ಕರೆದ ಹಿನ್ನೆಲೆಯಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸದ ವೇಳೆ ನಡೆದಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ತೋಟದ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸರು ಘಟನ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next