Advertisement

Sullia ಮಂಡೆಕೋಲು: ಮೆಸ್ಕಾಂ ಜಾಗೃತ ದಳದಿಂದ ದಾಳಿ

09:53 PM Jan 14, 2024 | Team Udayavani |

ಸುಳ್ಯ: ಕೃಷಿ ಕಾರ್ಯಗಳಿಗಾಗಿ ಸರಕಾರ ನೀಡುವ ಉಚಿತ ವಿದ್ಯುತ್‌ ಅನ್ನು ಗ್ರಾಹಕರೊಬ್ಬರು ಮನೆ ಮತ್ತು ಕೈಗಾರಿಕೆಗೆ ಬಳಸಿರುವ ಆರೋಪದಲ್ಲಿ ಮಂಗಳೂರಿನ ಮೆಸ್ಕಾಂ ಜಾಗೃತದಳ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಡೆಸಿದ್ದಾರೆ.

Advertisement

ಮಂಡೆಕೋಲಿನ ಕೆ.ಬಿ.ಇಬ್ರಾಹಿಂ ಎಂಬವರಿಗೆ ಕೃಷಿ ಕಾರ್ಯಕ್ಕೆ ಉಚಿತ ವಿದ್ಯುತ್‌ ಸೌಲಭ್ಯವಿದೆ. ಈ ಕೃಷಿ ಪಂಪ್‌ನಿಂದ ವಿದ್ಯುತ್‌ ಅನ್ನು ಇಬ್ರಾಹಿಂ ಅವರು ತಮ್ಮ ಮನೆ ಸೌಲಭ್ಯಕ್ಕೆ ಹಾಗೂ ಫ‌ರ್ನಿಚರ್‌ ತಯಾರಿ ಘಟಕಕ್ಕೆ ಬಳಸುತಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮೆಸ್ಕಾಂ ಜಾಗೃತದಳದ ಎ.ಇ.ಇ. ಪ್ರವೀಣ್‌ ಕುಮಾರ್‌ ನೇತೃತ್ವದ ತಂಡ ದಾಳಿ ನಡೆಸಿದೆ.

ಈ ಸಂದರ್ಭ ಅಕ್ರಮ ನಡೆಸಿರುವುದು ಕಂಡು ಬಂದಿದೆ. ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದು, ಇಬ್ರಾಹಿಂ ಅವರ ಮೇಲೆ ಕೇಸು ದಾಖಲಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next