Advertisement

ಸುಕುಮಾರ ಶೆಟ್ಟಿ , ರಾಕೇಶ್‌ ಮಲ್ಲಿ  ನಾಮಪತ್ರ ಸಲ್ಲಿಕೆ

10:48 AM Apr 22, 2018 | Team Udayavani |

ಬೈಂದೂರು: ಬಿಜೆಪಿ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎಂ. ಸುಕುಮಾರ ಶೆಟ್ಟಿ ಬೈಂದೂರು ಚುನಾವಣಾ ಅಧಿಕಾರಿ ಶ್ರೀನಿವಾಸ ಅವರಿಗೆ ಶನಿವಾರ ನಾಮಪತ್ರ ಸಲ್ಲಿಸಿದರು.

Advertisement

ಬೈಂದೂರು ಸೇನೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಕಾರ್ಯಕರ್ತರ ಸಭೆ ನಡೆಸಿ ಬಳಿಕ ಜಾಥಾ ಮೂಲಕ ಬೈಂದೂರು ಚುನಾವಣಾ ಕಚೇರಿಗೆ ತೆರಳಿದರು.


ಈ ಸಂದರ್ಭ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿ.ಪಂ. ಸದಸ್ಯ ಶಂಕರ ಪೂಜಾರಿ, ಅಶೋಕ ಕೊಟ್ಲೆ, ಟಿ.ಬಿ. ಶೆಟ್ಟಿ, ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.

ಜನಸೇವೆ ಮಾಡಿದ್ದೇನೆ
ಎರಡನೇ ಬಾರಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ.  ಜನ ಆಶೀರ್ವಾದ ಮಾಡುತ್ತಾರೆನ್ನುವ ನಂಬಿಕೆಯಿದೆ.  ಕಳೆದ ಬಾರಿ ಚುನಾವಣೆಯಲ್ಲಿ ಜನರ ಬಳಿ ತೆರಳಲು ಅವಕಾಶ ಇರಲಿಲ್ಲ. ಆದರೆ ಈ ಬಾರಿ ಕಳೆದ ನಾಲ್ಕೂವರೆ ವರ್ಷಗಳಿಂದ ಜನರ ಸೇವೆ ಮಾಡಿದ್ದೇನೆ. ಮಾತ್ರವಲ್ಲದೆ ಬೈಂದೂರಿನಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಜನರು ಬದಲಾವಣೆಗಾಗಿ ಆಶೀರ್ವಾದ ಮಾಡುತ್ತಾರೆ. 

 - ಬಿ.ಎಂ. ಸುಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next