Advertisement

LET: ಕರ್ನಾಟಕದಲ್ಲಿಆತ್ಮಾಹುತಿ ಸಂಚು: ಚಾರ್ಜ್‌ಶೀಟ್‌ ಸಲ್ಲಿಕೆ

12:36 AM Jan 13, 2024 | Team Udayavani |

ಹೊಸದಿಲ್ಲಿ: ಉಗ್ರ ಸಂಘಟನೆ ಲಷ್ಕರೆ ತಯ್ಯಬಾ (ಎಲ್‌ಇಟಿ)ದಿಂದ ಕರ್ನಾಟಕದಲ್ಲಿ ಆತ್ಮಾಹುತಿ ದಾಳಿ ನಡೆಸಲು ಸಂಚು ಹಾಗೂ ಜೈಲಿನಲ್ಲೇ ಕುಳಿತು ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ ಆರೋಪದ ಮೇರೆಗೆ ಎಂಟು ಮಂದಿ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಶುಕ್ರವಾರ ಆರೋಪ ಪಟ್ಟಿ ದಾಖಲಿಸಿದೆ.

Advertisement

ಈ ಎಂಟು ಮಂದಿ ಪೈಕಿ ಉಗ್ರರಾದ ಜುನೈದ್‌ ಅಹ್ಮದ್‌ ಅಲಿಯಾಸ್‌ ಜೆಡಿ ಮತ್ತು ಸಲ್ಮಾನ್‌ ಖಾನ್‌ ತಲೆಮರೆಸಿಕೊಂಡಿದ್ದಾರೆ. ಇಬ್ಬರು ವಿದೇಶಕ್ಕೆ ಪರಾರಿ ಯಾಗಿರುವ ಶಂಕೆ ಇದೆ. ಉಳಿದಂತೆ, ಹಲವು ಬಾಂಬ್‌ ಸ್ಫೋಟ್‌ ಪ್ರಕರಣದಲ್ಲಿ ಭಾಗಿಯಾಗಿರುವ ಕೇರಳದ ಕಣ್ಣೂರಿನ ಟಿ.ನಸೀರ್‌ ಜೀವಾವಧಿ ಶಿಕ್ಷೆಗೆ ಒಳಗಾಗಿ 2013ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಜತೆಗೆ ಆರೋಪಿಗಳಾದ ಸಯದ್‌ ಸುಹೇಲ್‌ ಖಾನ್‌, ಮೊಹಮ್ಮದ್‌ ಉಮರ್‌, ಜಯೀದ್‌ ತಬ್ರೇಜ್‌, ಸಯದ್‌ ಮುದಾಸ್ಸಿರ್‌ ಪಾಷಾ ಮತ್ತು ಮೊಹಮ್ಮದ್‌ ಫೈಸಲ್‌ ರಬ್ಟಾನಿ ಅಲಿಯಾಸ್‌ ಸದತ್‌ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಈ ಉಗ್ರರ ಅಡ್ಡೆ ಮೇಲೆ ದಾಳಿ ನಡೆಸಿದ್ದ ಬೆಂಗಳೂರು ನಗರ ಪೊಲೀಸರು, ಶಸ್ತ್ರಾಸ್ತ್ರಗಳು, ಮದ್ದು- ಗುಂಡುಗಳು, ಹ್ಯಾಂಡ್‌ ಗ್ರೆನೇಡ್‌ಗಳು ಮತ್ತು ವಾಕಿ-ಟಾಕಿಗಳನ್ನು ವಶಪಡಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next