Advertisement

ಮೊಮ್ಮಗಳ ಆತ್ಮಹತ್ಯೆ; ಸಾಹೇಬ್ರು ಇಷ್ಟು ಕಣ್ಣೀರಿಟ್ಟಿದ್ದು ನೋಡಿರಲಿಲ್ಲ;ಕಂಬನಿಯಾದ‌ ಸಿಬ್ಬಂದಿ

10:42 AM Jan 29, 2022 | Team Udayavani |

ಬೆಂಗಳೂರು :“ಪಾಪ ಸಾಹೇಬ್ರು ತುಂಬಾನೆ ಅತ್ತು ಬಿಟ್ಟರು. ಅವರು ಕಣ್ಣೀರು ಹಾಕಿದ್ದೇ ನೋಡಿರಲಿಲ್ಲ. ಈ ರೀತಿ ಬಿಕ್ಕಿ ಬಿಕ್ಕಿ ಅತ್ತಿದ್ದು ಇದೇ ಮೊದಲು. ಎಲ್ಲರಿಗೂ ಅಯ್ಯೋ ಅನ್ನಿಸಿಬಿಡ್ತು”……ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಣ್ಣೀರಿಟ್ಟಿದ್ದನ್ನು ಕಂಡು ಕಾವೇರಿಯಲ್ಲಿ ಇರುವ ಉದ್ಯೋಗಿಗಳು ಈ‌ ರೀತಿ ನೋವು ತೋಡಿಕೊಂಡಿದ್ದಾರೆ.

Advertisement

ಎಂಥ ವಿಷಮ‌ ಸ್ಥಿತಿಯಲ್ಲೂ ಧೃತಿಗೆಡದ ಯಡಿಯೂರಪ್ಪ ಮೊಮ್ಮಗಳ ಸಾವಿನಿಂದ ಅಕ್ಷರಶಃ ಕುಸಿದು ಹೋಗಿದ್ದರಂತೆ . ಎರಡು ದಿನ‌ ಹಿಂದಿನವರೆಗೂ ತಮ್ಮ ಜತೆಯೇ ಇದ್ದ‌ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಅವರನ್ನು ತೀವ್ರವಾಗಿ ಕಾಡುತ್ತಿದ್ದು, ಇಷ್ಟೊಂದು ದುಃಖಪಟ್ಟಿದ್ದನ್ನು ಇದುವರೆಗೆ ಯಾರೂ ನೋಡೇ ಇರಲಿಲ್ಲ ಎನ್ನುತ್ತಾರೆ ಸಿಬ್ಬಂದಿ.

ಖಿನ್ನತೆ ಕಾರಣವೇ ? : ಯಡಿಯೂರಪ್ಪ ಆಪ್ತ ಮೂಲದ ಪ್ರಕಾರ ಸೌಂದರ್ಯ ಕುಟುಂಬದಲ್ಲಿ ಯಾವುದೇ ವಿವಾದ ಇರಲಿಲ್ಲ. ಅವರ ಪತಿ ಡಾ.ನೀರಜ್ ತುಂಬಾ ಒಳ್ಳೆಯ ವ್ಯಕ್ತಿ. ಹೆರಿಗೆ ಬಳಿಕ ಕಾಣಿಸಿಕೊಂಡ ಖಿನ್ನತೆಯೇ ಇದಕ್ಕೆ ಕಾರಣ ಎಂದು ಪ್ರತಿಪಾದಿಸುತ್ತಾರೆ.

ಆತ್ಮಹತ್ಯೆಗೆ ಮುನ್ನ ಆ ಮಗುವನ್ನು‌ ಒಮ್ಮೆ ನೆನೆಸಿಕೊಂಡರೆ ಈ ರೀತಿ ಮಾಡುತ್ತಿರಲಿಲ್ಲವೇನೋ ? ಒಳ್ಳೆ ಗೊಂಬೆ ತರ ಇದ್ದ ಮಗುವನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ. ಇತ್ತೀಚೆಗಂತೂ ಸಾಹೇಬ್ರು ಆ ಮಗುವಿನ‌ ಜತೆಯೇ ಇರುತ್ತಿದ್ದರು ಎಂದು ಸಿಬ್ಬಂದಿ ಬೇಸರ ತೋಡಿಕೊಂಡಿದ್ದಾರೆ.

ಮಹಜರು :
ಪ್ರಕರಣ ಸಂಬಂಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಇಂದು ಘಟನಾ ಸ್ಥಳದ ಮಹಜರು ನಡೆಸಲಿದ್ದಾರೆ. ಡಾ.ನೀರಜ್ ಅವರ ಹೇಳಿಕೆ ದಾಖಲಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next