Advertisement

ರಾಖಿ ಖರೀದಿಸಲು ಹಣ ಕೊಡಲಿಲ್ಲವೆಂದು ಆತ್ಮಹತ್ಯೆ

10:01 AM Aug 08, 2017 | Team Udayavani |

ಬೆಳಗಾವಿ: ಸಹೋದರನಿಗಾಗಿ ರಾಖಿ ಖರೀದಿಸಲು ತನ್ನ ಪತಿ 10 ರೂ. ನೀಡದ್ದಕ್ಕೆ ಮನನೊಂದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಡಗಾವಿಯ ವಡ್ಡರ ಛಾವಣಿಯಲ್ಲಿ ಸೋಮವಾರ ನಡೆದಿದೆ. ಮಹಾದೇವಿ ಅಶೋಕ ಗೊಲ್ಲರ(23) ಆತ್ಮಹತ್ಯೆ ಮಾಡಿಕೊಂಡವರು. 

Advertisement

ಸೋಮವಾರ ರಕ್ಷಾ ಬಂಧನಕ್ಕಾಗಿ ತವರು ಮನೆಗೆ ತೆರಳಲು ಸಿದ್ಧಳಾದ ಮಹಾದೇವಿ ರಾಖಿ ಖರೀದಿಸಲು ತನ್ನ ಪತಿ ಬಳಿ 10 ರೂ. ಕೊಡುವಂತೆ ಕೇಳಿದ್ದಾರೆ. ಆದರೆ ವಿಪರೀತ ಸಾರಾಯಿ ನಶೆಯಲ್ಲಿದ್ದ ಪತಿ ಹಣ ಕೊಡಲು ನಿರಾಕರಿಸಿದ್ದಾನೆ. ಇದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ನಂತರ ಜಗಳ ಮಾಡಿಕೊಂಡು ಪತಿ ಅಶೋಕ ಮನೆಯಿಂದ ಹೊರ ಹೋಗಿದ್ದಾನೆ. ಹೀಗಾಗಿ ನೊಂದ ಮಹಾದೇವಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next