Advertisement

ಸಾಲ ಬಾಧೆ: ವಿಜಯಪುರದ ರೈತ ಆತ್ಮಹತ್ಯೆ

10:42 AM Sep 21, 2019 | keerthan |

ವಿಜಯಪುರ: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ‌ ನಡೆದಿದೆ.
ಮೃತ ರೈತನನ್ನು ಅಣ್ಣಾರಾಯ ಮಳಸಿದ್ದಪ್ಪ (50) ಎಂದು ಗುರುತಿಸಲಾಗಿದೆ.

Advertisement

ಅಣ್ಣಾರಾಯ ಮಳಸಿದ್ದಪ್ಪ ಅವರು ತೋಟದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರೈತ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 70 ಸಾವಿರ ರೂ. ಸಾಲ ಮಾಡಿದ್ದ‌ರು. ಇದಲ್ಲದೇ ಇತರ ಕಡೆಯಿಂದ 2 ಲಕ್ಷ ರೂ. ವರೆಗೆ ಸಾಲ ಪಡೆದಿದ್ದ ಎನ್ನಲಾಗುತ್ತಿದೆ .

4 ಎಕರೆ ಜಮೀನಿನಲ್ಲಿ ಬಿತ್ತಿದ್ದ ತೊಗರಿ ಬೆಳೆ ಮಳೆ ಇಲ್ಲದೇ ಹಾನಿಯಾಗಿದ್ದು, ಸತತ ಬರಗಾಲದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next