Advertisement

ಕಬ್ಬು ಬೆಳೆವವರಿಗೆ ಕಿವಿಮಾತು

12:39 PM Apr 19, 2021 | Team Udayavani |

ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಕಬ್ಬು ನಾಟಿ ಮಾಡಲು ಭೂಮಿಯನ್ನು ಹದಗೊಳಿಸುವ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಭಾರತದಲ್ಲಿ ಕಬ್ಬು ಬೆಳೆ 2ನೇ ಅತಿ ದೊಡ್ಡ ವಾಣಿಜ್ಯ ಬೆಳೆಯಾಗಿದೆ. ದೇಶದಲ್ಲಿ 50ಲಕ್ಷ ಹೆಕ್ಟರ್‌ ಭೂ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತಿದೆ.

Advertisement

ಆದರೆ ಈಚಿನ ದಿನಗಳಲ್ಲಿ ಮಣ್ಣಿನ ಆರೋಗ್ಯವನ್ನು ಪರೀಕ್ಷಿಸದೇ ಕೃಷಿಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮಣ್ಣಿನಲ್ಲಿ ಯಾವ ಪೋಷಕಾಂಶಗಳು ಅಧಿಕವಾಗಿವೆ ಮತ್ತು ಕೊರತೆಯಾಗಿವೆ ಎಂಬುದನ್ನು ತಿಳಿಯದೇ ನೆರೆಯ ರೈತರೊಂದಿಗಿನ ಪೈಪೋಟಿ ಮತ್ತು ಹೆಚ್ಚುಬೆಳೆ ಪಡೆಯಬೇಕೆಂಬ ದುರಾಸೆಯಿಂದ ಯಥೇತ್ಛವಾಗಿ ನೀರು ಹಾಗೂ ರಸಗೊಬ್ಬರ ಬಳಸಲಾಗುತ್ತಿದೆ.ಇದರಿಂದ ಮಣ್ಣಿನ ಆರೋಗ್ಯ ಹಾಳಾಗಿ ಇಳುವರಿ ಕಡಿಮೆಯಾಗುತ್ತಿದೆ.

ಇಂಥ ಸಂದರ್ಭದಲ್ಲಿ ಈ ಕಡೆಯಲ್ಲಿ ಭೂಮಿಯ ಫ‌ಲವತ್ತತೆಯನ್ನೂಕಾಪಾಡಿಕೊಳ್ಳಬೇಕು, ಆ ಕಡೆ ಹೆಚ್ಚು ಇಳುವರಿಯನ್ನೂ ಪಡೆಯಬೇಕು ಅನ್ನುವವರು,ಈ ಕೆಳಗಿನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕು.ಕಬ್ಬು ನಾಟಿಗೂ ಮೊದಲು ಪ್ರತಿಎಕರೆಗೆ 25 ಕೆ.ಜಿ. ಸೆಣಬು ಅಥವಾಡೈಂಚಾ ಹಸಿರೆಲೆಗೊಬ್ಬರಗಳನ್ನುಬಿತ್ತನೆ ಮಾಡಿ 45 ದಿನಗಳ ನಂತರಮೊಗ್ಗು ಹೊಡೆದು ಮಣ್ಣಿನಲ್ಲಿಹದವಾಗಿ ಮಿಶ್ರಣಗೊಳಿಸಬೇಕು.

  • 90 ದಿನಗಳ ನಂತರ ಸಾಲುಒಡೆಯುವಾಗ 10 ಕೆ.ಜಿ.ಅಜೋಸ್ಪೆçರಿಲಂ , 10 ಕೆ.ಜಿ.ರಂಜಕಕರಗಿಸುವ ಅಣುಜೀವಿಗೊಬ್ಬರಗಳಿಂದ ಪುಷ್ಠಿಕರಿಸಿದ 8ಟನ್‌ ಸಾವಯವ ಗೊಬ್ಬರ ಮತ್ತು2 ಟನ್‌ ಎರೆಗೊಬ್ಬರವನ್ನು ಸಾಲಿನಎರಡೂ ಮಗ್ಗುಲಿಗೆ ಹಾಕಬೇಕು.
  • ಯಾವುದೇ ಕಾರಣಕ್ಕೂಕಬ್ಬಿನೊಂದಿಗೆ ಗೋವಿಜೋಳ ಸೇರಿದಂತೆ ಏಕದಳ ಬೆಳೆಗಳನ್ನುಬೆಳೆಯಬಾರದು ಕಾರಣ, ಈ ಏಕದಳ ಬೆಳೆಗಳು ತಮ್ಮ ಅಲ್ಪಜೀವಿತಾವಧಿಯಲ್ಲಿಯೇ ಪೋಷಕಾಂಶಗಳನ್ನು ಉಪಯೋಗಿಸಿ ವಾರ್ಷಿಕ ಬೆಳೆಯಾದ ಕಬ್ಬಿಗೆ ಪೋಷಕಾಂಶಗಳ ಕೊರತೆ ಉಂಟುಮಾಡುತ್ತವೆ.
  • ಕಬ್ಬಿಗೆ ನೀರನ್ನು ಹಾಯಿಸುವಾಗ ಪ್ರತಿಸಲ ದನಗಳ ಗಂಜಲ ಹಾಗೂ ಸಗಣಿ ನೀರಿನೊಂದಿಗೆ ಕರಗಿಸಿ ಬಿಡಬೇಕು. ಈ ಕ್ರಮವು ಕಬ್ಬಿಗೆ ಅವಶ್ಯವಿರುವ ಪೋಷಕಾಂಶಗಳನ್ನುಒದಗಿಸುವ ಶ್ರೇಷ್ಠ ಮಾರ್ಗವಾಗಿದೆ.
  • ಕಬ್ಬಿಗೆ ದೀರ್ಘಾವಧಿಯವರೆಗೆ ಸಾರಜನಕ ಮತ್ತು ಪೋಟ್ಯಾಷ್‌ಗೊಬ್ಬರ ಪೂರೈಸುವುದರಿಂದ ಕಬ್ಬಿನಲ್ಲಿ ಬೆಂಡಾಗುವುದಿಲ್ಲ ಹಾಗೂಒಳ್ಳೆಯ ಸಕ್ಕರೆ ಅಂಶವನ್ನು ಕಬ್ಬಿನಲ್ಲಿ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.
  • ನೀರು ಸಾಕಷ್ಟಿದೆ ಎಂದು ಕಬ್ಬಿಗೆಮೇಲಿಂದ ಮೇಲೆ ನೀರನ್ನು ಬಿಡಬಾರದು. ಸ್ವಲ್ಪ ಭೂಮಿ ಒಣಗಿ ಬೆಳೆಯು ಬಾಡಿದ ನಂತರ ನೀರನ್ನುಕೊಡಬೇಕು. ಅತಿಯಾದ ನೀರಿನ ಉಪಯೋಗದಿಂದ ಕಬ್ಬಿನಲ್ಲಿ ಸಿಹಿ ಅಂಶ ಕಡಿಮೆಯಾಗಬಹುದು. ­

ಬಸವರಾಜ ಶಿವಪ್ಪ ಗಿರಗಾಂವಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next