Advertisement

ಕಬ್ಬು ಹಣ ಬಾಕಿ: ರಾಜ್ಯಕ್ಕೆ ಸು.ಕೋರ್ಟ್‌ ನೋಟಿಸ್‌

12:03 AM Feb 13, 2021 | Team Udayavani |

ಹೊಸದಿಲ್ಲಿ: ಕಬ್ಬು ಹಣ ಬಾಕಿ ಇರಿಸಿಕೊಂಡಿರುವ ವಿಚಾರವಾಗಿ ಕೇಂದ್ರ ಸರಕಾರ ಮತ್ತು ಕರ್ನಾಟಕ ಸಹಿತ 16 ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

Advertisement

ರೈತರಿಗೆ 15,683 ಕೋಟಿ ರೂ. ಬಾಕಿ ನೀಡಬೇಕಾಗಿದ್ದು, ಇದನ್ನು ತತ್‌ಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಕಬ್ಬು ಹಣ ಬಾಕಿ ಉಳಿಸಿಕೊಳ್ಳದಂತೆ ನಿರ್ದೇಶಿಸಬೇಕು ಎಂದು ಕೊರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ನೋಟಿಸ್‌ ಜಾರಿ ಮಾಡಿತು.

ವಿಚಾರಣೆ ನಡೆಸಿದ ಸಿಜೆಐ ಎಸ್‌.ಎ. ಬೋಬೆx ಮತ್ತು ನ್ಯಾಯಮೂರ್ತಿಗಳಾದ ಎ.ಎಸ್‌. ಬೋಪಣ್ಣ ಮತ್ತು ವಿ. ರಾಮಸುಂದರಮಣಿಯನ್‌ ಅವರಿದ್ದ ಪೀಠ, ಅರ್ಜಿ ಬಗ್ಗೆ ಪರಿಶೀಲನೆ ನಡೆಸಲು ತೀರ್ಮಾನಿಸಿತು.  5 ಕೋಟಿ ರೈತರ ಜೀವನ ಈ ಕಬ್ಬು ಮಾರಿದ ಹಣದ ಮೇಲೆ ನಿಂತಿದೆ ಮತ್ತು 50 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗುತ್ತಿದೆ ಎಂದು ಅರ್ಜಿ

ದಾರರ ಪರ ವಾದಿಸಿದ ವಕೀಲ ಸಂಜಯ್‌ ಪಾರೀಖ್‌ ಹೇಳಿದರು. ಕಾರ್ಖಾನೆಗಳು ಹಣ ಬಾಕಿ ಉಳಿಸಿಕೊಂಡಿರುವುದರಿಂದ ಹಲವಾರು ರೈತರು ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದಾರೆ ಎಂದು ಮತ್ತೂಬ್ಬ ವಕೀಲ ವಿವೇಕ್‌ ಸಿಂಗ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next