ವಿಜಯಪುರ : ವಿದ್ಯುತ್ ತಂತಿಗಳ ಘರ್ಷಣೆಯಿಂದ ಹೊತ್ತಿಕೊಂಡ ಬೆಂಕಿ ಕಟಾವಿಗೆ ಬಂದಿದ್ದ 15 ಎಕರೆ ಕಬ್ಬು ಬೆಳೆಯನ್ನು ಭಸ್ಮ ಮಾಡಿರುವ ದುರಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ನಾಗಠಾಣ ಗ್ರಾಮ ಮಸಳಿ ಕುಟುಂಬದ ನಿಂಗಪ್ಪ, ಮಲ್ಲಪ್ಪ ಹಾಗೂ ಬಾಬು ಎಂಬರಿಗೆ ಸೇರಿದ 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ.
ಸದರಿ ರೈತರ ಜಮೀನ ಮಾರ್ಗವಾಗಿ ಹೋಗಿರುವ ವಿದ್ಯುತ್ ಮಾರ್ಗದ ವೈರ್ ಗಳು ಸಡಿಲಗೊಂಡಿದ್ದವು. ಹೆಸ್ಕಾಂ ಸಿಬ್ಬಂದಿ ವೈರ್ ಗಳನ್ನು ಬಿಗಿಯಾಗಿ ಜೋಡಿಸದ ಕಾರಣ ಸಡಿಲಗೊಂಡಿದ್ದ ವೈರ್ ಗಳು ಗಾಳಿಗೆ ಪರಸ್ಪರ ಘರ್ಷಣೆಗೊಂಡು ಬೆಂಕಿ ಹೊತ್ತಿಕೊಂಡಿದೆ.
ಸುದ್ದಿ ತಿಳಿದು ಅಗ್ನಿಶಾಮಕ ಸೇವೆಯ ಸಿಬ್ಬಂದಿ ಬೆಂಕಿ ನಂದಿಸುವ ವೇಳೆಗೆ ರೈತರು ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಟಾವಿಗೆ ಬಂದಿದ್ದ 15 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಂಕಿಯಿಂದ ನಾಶವಾಗಲು ಹೆಸ್ಕಾಂ ನಿರ್ಲಕ್ಷವೇ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಸ್ಕಾಂ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ಆಗಿರುವ ಲಕ್ಷಾಂತರ ರೂ. ಹಾನಿಯನ್ನು ಹೆಸ್ಕಾಂ ಕಂಪನಿ ಭರಿಸಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಸುದ್ದಿ ತಿಳಿದು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬದ ನಾಲ್ವರ ಶವ ಪತ್ತೆ… ಬಾತ್ರೂಮ್ನಲ್ಲಿ ಇತ್ತು ಗನ್