Advertisement

ಲಾಕ್‌ಡೌನ್‌ಗೆ ಸಕ್ಕರೆ ನಾಡು ಬೆಂಬಲ

02:46 PM Apr 29, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆ ಸಕ್ಕರೆ ನಾಡು ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ಗೆ  ಸ್ತಬ್ಧಗೊಂಡಿದೆ.

Advertisement

ಬುಧವಾರ ಬೆಳಗ್ಗೆಯಿಂದಲೇ ಅಗತ್ಯ ಸೇವೆಹೊರತುಪಡಿಸಿ ಉಳಿದೆಲ್ಲ ವ್ಯಾಪಾರ-ವಹಿವಾಟುಸ್ಥಗಿತಗೊಂಡಿತ್ತು. ಅಂಗಡಿ ಮಾಲಿಕರು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿ ಕೊರೊನಾನಿಯಂತ್ರಣಕ್ಕೆ ಸಹಕರಿಸಿದರು.

ಮಂಡ್ಯ ನಗರ, ಮದ್ದೂರು, ಶ್ರೀರಂಗಪಟ್ಟಣ,ಮಳವಳ್ಳಿ, ನಾಗಮಂಗಲ, ಪಾಂಡವಪುರ ಹಾಗೂಕೆ.ಆರ್‌.ಪೇಟೆ ಪಟ್ಟಣಗಳಲ್ಲೂ ಲಾಕ್‌ಡೌನ್‌ಗೆಬೆಂಬಲ ವ್ಯಕ್ತವಾಯಿತು.ಬಂದ್‌: ನಗರದ ವಾಣಿಜ್ಯ ಕೇಂದ್ರಗಳಾದ ಪೇಟೆಬೀದಿ, ವಿವಿ ರಸ್ತೆ, ವಿನೋಬಾ ರಸ್ತೆ, ನೂರಡಿ ರಸ್ತೆ,ಆರ್‌.ಪಿ.ರಸ್ತೆ, ಗುತ್ತಲು ರಸ್ತೆ, ಬೆಂಗಳೂರು-ಮೈಸೂರು ಹೆದ್ದಾರಿ ಸೇರಿ ನಗರದ ಪ್ರಮುಖರಸ್ತೆಗಳ ಅಂಗಡಿಗಳು, ಷೋ ರೂಂ, ವಿವಿಧ ಎಲ್ಲರೀತಿಯ ಅಂಗಡಿಗಳು ಮುಚ್ಚಿದ್ದವು.

ರಸ್ತೆಗಿಳಿಯದ ವಾಹನ: ಸರಕು ಸಾಗಾಣೆ ವಾಹನಹೊರತುಪಡಿಸಿ ಬೇರೆ ಯಾವುದೇ ವಾಹನ ರಸ್ತೆಗಿಳಿಯಲಿಲ್ಲ. ಪ್ರಮುಖ ರಸ್ತೆ ಸೇರಿ ಬೆಂಗಳೂರು-ಮೈಸೂರು ಹೆದ್ದಾರಿ ಬಿಕೋ ಎನ್ನುತ್ತಿತ್ತು.ಸಾರಿಗೆ ಸ್ತಬ್ಧ: ಸಾರಿಗೆ ಸಂಚಾರವೂ ಬಂದ್‌ ಆಗಿದ್ದುಬಸ್‌ ನಿಲ್ದಾಣ ಖಾಲಿಯಾಗಿತ್ತು. ರೈಲು ಸಂಚಾರವಿದ್ದರೂ ಪ್ರಯಾಣಿಕರಿರಲಿಲ್ಲ. ಕೆಲವು ಆಟೋ,ಬೈಕ್‌ ಸಂಚರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಿಯಮ ಉಲ್ಲಂಘನೆ: ಬೆಳಗ್ಗೆ 6ರಿಂದ 10ರವರೆಗೆಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು.ಈ ವೇಳೆ ಜನ ಸಾಮಾಜಿಕ ಅಂತರ ಕಾಪಾಡಲಿಲ್ಲ.ಮಾರುಕಟ್ಟೆ, ವಿವಿ ರಸ್ತೆ, ಹೊಸಹಳ್ಳಿ ಸರ್ಕಲ್‌ ಸೇರಿವಿವಿಧೆಡೆ ಅಂಗಡಿಗಳ ಮುಂದೆ ಗ್ರಾಹಕರುತುಂಬಿದ್ದರು. ತರಕಾರಿ, ಹಣ್ಣು, ದಿನಸಿ ಸಾಮಗ್ರಿ,ಮೀನು, ಮಾಂಸದ ಅಂಗಡಿಗಳ ಮುಂದೆಜನಜಂಗುಳಿ ಸೇರಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next