ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಧೀರ್ ಅಂಗೂರ್ ನ್ಯಾಯಾಂಗ ಬಂಧನಲ್ಲಿದ್ದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ, ಪ್ರಭಾವಿಯಾಗಿರುವ ಆರೋಪಿಯು ವಿಚಾರಣೆ ಹಂತದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಹುದು ಎಂಬ ಪ್ರಾಸಿಕ್ಯೂಷನ್ ಮನವಿಯನ್ನು ಪುರಸ್ಕರಿಸಿ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿದೆ.
Advertisement
ಅಲಯನ್ಸ್ ವಿವಿ ಆಡಳಿತ ಮೇಲೆ ಹಿಡಿತ ಸಾಧಿಸಲು ಹಾಗೂ ವಿವಿ ಆಸ್ತಿ ಸಂಬಂಧಿಸಿದಂತೆ ಸಹೋದರ ಮಧುಕರ್ ಅಂಗೂರ್ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ, ಪ್ರಾಧಿಕಾರಗಳಲ್ಲಿ ಹಿನ್ನಡೆಯಾಗುತ್ತಿದ್ದರಿಂದ ಸುಧೀರ್ ಅಂಗೂರ್ ಕುಪಿತಗೊಂಡಿದ್ದರು. ವ್ಯಾಜ್ಯಗಳಲ್ಲಿ ಹೋರಾಡಲು ಮಧುಕರ್ ಅಂಗೂರ್ಗೆ ಅಯ್ಯಪ್ಪ ದೊರೆ ನೆರವಾಗುತ್ತಿದ್ದರು. ಇನ್ನು ತನ್ನಿಂದ ಪಡೆದ ಹಣವನ್ನು ಮರಳಿಸುವಂತೆ ಸುಧೀರ್ ಅಂಗೂರ್ಗೆ ಅಯ್ಯಪ್ಪ ದೊರೆ ಒತ್ತಡ ಹಾಕುತ್ತಿದ್ದರು. ಇದರಿಂದ ಕುಪಿತಗೊಂಡ ಸುಧೀರ್ ಅಂಗೂರ್, ಸುಪಾರಿ ಕೊಟ್ಟು ಅಯ್ಯಪ್ಪ ದೊರೆಅವರನ್ನು ಕೊಲೆ ಮಾಡಿಸಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳನ್ನು ಪ್ರಾಸಿಕ್ಯೂಷನ್ ಒದಗಿಸಿದೆ ಎಂದು ನ್ಯಾಯಾಲಯ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದೆ. 2019ರ
ಅಕ್ಟೋಬರ್ ನಲ್ಲಿ ಆರ್.ಟಿ ನಗರ ಮೈದಾನದಲ್ಲಿ ಅಯ್ಯಪ್ಪ ದೊರೆ ಕೊಲೆ ನಡೆದಿತ್ತು.