Advertisement

ಗಾಂಜಾ ಮಾರುತ್ತಿದ್ದ ಸುಡಾನ್‌ ಪ್ರಜೆ ಬಂಧನ

06:27 AM Jan 23, 2019 | Team Udayavani |

ಬೆಂಗಳೂರು: ಗಾಂಜಾ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಸುಡಾನ್‌ನ ಮೂಲದ ಇಂಜಿನಿಯರ್‌ನನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೂಡಾನ್‌ನ ಕತ್ರುಮ್‌ನ ಅಹ್ಮದ್‌ ಮೂಸ (26)ಬಂಧಿಸಿತ ಆರೋಪಿ. ಈತನಿಂದ  480 ಗ್ರಾಂ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಇಂಜಿನಿಯರಿಂಗ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಕಾಲೇಜಿನಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣವೂ ಈತನ ಮೇಲಿದೆ. ಜತೆಗೆ ವೀಸಾ ಅವಧಿ ಮುಗಿದಿದ್ದರೂ ಪ್ರಕರಣದ ತನಿಖೆಯ ಕಾರಣಕ್ಕಾಗಿ ಮೂಸ ನಗರದಲ್ಲೇ ಉಳಿದುಕೊಂಡಿದ್ದ.

ಬೇರೆಡೆಯಿಂದ ಗಾಂಜಾ ತಂದು ಗಿರಾಕಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಿ ಮೋಜಿನ ಜೀವನ ನಡೆಸುತ್ತಿದ್ದ. ಗಾಂಜಾ ವ್ಯಸನಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next