Advertisement

ಏಕಾಏಕಿ ಬಂದ ನೀರು: ಹಳ್ಳದ ಮಧ್ಯೆ ಸಿಲುಕಿಕೊಂಡ ಐವರು ರೈತರು

12:17 PM Sep 09, 2022 | Team Udayavani |

ಕೊಪ್ಪಳ: ಹಳ್ಳದಲ್ಲಿ ಏಕಾಏಕಿ ನೀರು ಬಂದ ಕಾರಣ ಐವರು ರೈತರು ಹಳ್ಳದ ನಡುವೆ ಸಿಲುಕಿಕೊಂಡ ಘಟನೆ ಹಿರೇಹಳ್ಳದಲ್ಲಿ ನಡೆದಿದೆ.

Advertisement

ಕೊಪ್ಪಳ ತಾಲೂಕಿನ ಕೋಳೂರು ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಮಹಾಂತೇಶ ಡೊಳ್ಳಿನ, ರಮೇಶ ಡೊಳ್ಳಿನ, ಬಸವರಾಜ ಗೊಂದಿಹೊಸಳ್ಳಿ, ಬಸವರಾಜ ಹುಯಿಲಗೋಳ, ಕೆಂಚಪ್ಪ ಕುರಬರ ಸಿಲುಕಿಕೊಂಡಿದ್ದಾರೆ.

ಹಳ್ಳದ ದಡದಲ್ಲಿರುವ ಕೃಷಿ ಪಂಪು ಸೆಟ್ ತೆಗೆಡಿದಲು ಈ ರೈತರು ನೀರು ಕಡಿಮೆ ಇದ್ದ ವೇಳೆ ಹೋಗಿದ್ದಾರೆ. ಆದರೆ ಏಕಾಏಕಿ ಹಿರೇಹಳ್ಳದಿಂದ ನೀರು ಬಿಡಲಾಗಿದೆ. ಹೀಗಾಗಿ ರೈತರು ನಡುವಲ್ಲಿ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ:ಬ್ರಿಟನ್ ರಾಣಿ ಎಲಿಜಬೆತ್ II ಯುಗಾಂತ್ಯ: ದೀರ್ಘಕಾಲದ ಬಳಿಕ ಚಾರ್ಲ್ಸ್ ಮುಡಿಗೆ ರಾಜ ಕಿರೀಟ

ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದ್ದು, ತಹಶಿಲ್ದಾರ್ ವಿಠ್ಠಲ್ ಭೇಟಿ ನೀಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next